×
Ad

ಲಲಿತಾ ನಾಯಕ್‌ಗೆ ಬೆದರಿಕೆ: ಖಂಡನೆ

Update: 2016-08-30 23:49 IST

ಉಡುಪಿ, ಆ.30: ಲೇಖಕಿ, ಮಾಜಿ ಸಚಿವೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷೆ ಡಾ.ಬಿ.ಟಿ. ಲಲಿತಾ ನಾಯಕ್‌ರಿಗೆ ಕೊಲೆ ಬೆದರಿಕೆ ಯೊಡ್ಡಿರುವುದನ್ನು ಡಬ್ಲುಪಿಐ ಉಡುಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ.ಕಲ್ಬುರ್ಗಿ ಹತ್ಯೆಗೆ ಕಾರಣರಾದ ಸಮಾಜ ಘಾತುಕ ಶಕ್ತಿಗಳು ಕೊಲೆಬೆದರಿಕೆ ಹಾಕಿದೆ ಎಂದು ಜಿಲ್ಲಾಧ್ಯಕ್ಷ ಅಝೀಝ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News