×
Ad

ಅಪಘಾತ: ಐವರಿಗೆ ಗಾಯ

Update: 2016-08-30 23:51 IST

ಪಡುಬಿದ್ರೆ, ಆ.30: ಕನ್ನಂಗಾರ್ ಬೈಪಾಸ್ ಸಮೀಪ ರಾ.ಹೆ.66ರಲ್ಲಿ ಆ.29ರಂದು ಸಂಜೆ 5:15ಕ್ಕೆ ಕಾರೊಂದು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಐದು ಮಂದಿ ಗಾಯಗೊಂಡಿದ್ದಾರೆ.
ಕಾಪು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಟ್ಜ್ ಕಾರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿರಸ್ತೆ ಬದಿಯ ಚರಂಡಿಗೆ ಬಿತ್ತೆನ್ನಲಾಗಿದೆ. ಇದರ ಪರಿ ಣಾಮ ಕಾರಿನಲ್ಲಿದ್ದ ಮಂಗಳೂರು ಕುದ್ರೋಳಿಯ ಅಫ್ರತ್, ಖತೀಜಾ ರಿಹಾನ ಬಶೀರ್, ಮಶೂರಾ, ಜಲೀಲ್, ಚಾಲಕ ಮೊಯ್ದೀನ್ ಫರಾಜ್ ಗಾಯ ಗೊಂಡು ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News