‘ಕಂದಕ್ ಪ್ರೀಮಿಯರ್ ಲೀಗ್’ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ

Update: 2016-08-31 13:00 GMT

ಮಂಗಳೂರು, ಆ. 31: ಕಂದಕ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಗರದ ನೆಹರೂ ಮೈದಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕಳೆದ 15 ದಿನಗಳಿಂದ ಆಯೋಜಿಸಲಾದ ಕೆಪಿಎಲ್ (ಕಂದಕ್ ಪ್ರೀಮಿಯರ್ ಲೀಗ್) ಫುಟ್ಬಾಲ್ ಪಂದ್ಯಾವಳಿಯು ಸಮಾರೋಪಗೊಂಡಿತು.

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಸಚೇತಕ ಶಶಿಧರ್ ಹೆಗ್ಡೆ, ಬ್ಯಾರಿ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಮನಪಾ ಸದಸ್ಯ ಅಬ್ದುಲ್ಲತೀಫ್ ಕಂದಕ್, ಉದ್ಯಮಿ ಮೊಯ್ದೀನ್ ಉಸ್ಮಾನ್, ಸಲಾಂ ಫರಂಗಿಪೇಟೆ ಉಪಸ್ಥಿತರಿದ್ದರು.

ಫೈನಲ್ ಪಂದ್ಯಾಟದಲ್ಲಿ ಯಂಗ್ ಚಾಲೆಂಜರ್ಸ್‌ ತಂಡವು ಪ್ರಥಮ ಸ್ಥಾನ ಪಡೆದರೆ, ಸಿಟಿಜನ್ ಕಂದಕ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News