ನೀಲೇಶ್ವರದಲ್ಲಿ ಮುಳುಗಿದ ಬೋಟ್: ಪವಾಡಸದೃಶವಾಗಿ ಮೀನುಗಾರರು ಪಾರು

Update: 2016-09-01 11:40 GMT

ಕಾಸರಗೋಡು, ಸೆ.1: ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ ಮೀನುಗಾರರು ಪವಾಡ ಸದೃಶವಾಗಿ ಪಾರಾದ ಘಟನೆ ಗುರುವಾರ ನೀಲೇಶ್ವರದಲ್ಲಿ ನಡೆದಿದೆ.

ಬೋಟ್‌ನ ಅಡಿಭಾಗದ ಹಲಗೆಯಲ್ಲಿ ರಂಧ್ರದ ಮೂಲಕ ನೀರು ನುಗ್ಗಿ ಈ ಘಟನೆ ನಡೆದಿದೆ.

ಈ ಸಮಯದಲ್ಲಿ ಹತ್ತಿರದಲ್ಲೇ ಸಾಗುತ್ತಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ಇವರನ್ನು ರಕ್ಷಿಸಿದರು. ಸತ್ಯನ್, ರಾಮಚಂದ್ರ, ಹರೀಶ್, ಸುನಿಲ್ ಎಂಬವರನ್ನು ರಕ್ಷಿಸಲಾಯಿತು. ಮೀನು ಹಿಡಿಯುವ ಬಲೆ ಸಮುದ್ರಪಾಲಾಗಿದ್ದು, ಬೋಟ್‌ಗೆ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News