ಮದ್ಯ ಸಾಗಾಟ ಪ್ರಕರಣದ ಆರೋಪಿಯ ಖುಲಾಸೆ

Update: 2016-09-01 15:57 GMT

ಪುತ್ತೂರು, ಸೆ.1: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಎಂಬಲ್ಲಿ 5 ವರ್ಷಗಳ ಹಿಂದೆ ನಡೆದಿದ್ದ ಅಕ್ರಮ ಮದ್ಯ ಸಾಗಾಟ ಪ್ರಕರಣವೊಂದರ ಆರೋಪಿಯನ್ನು ಪುತ್ತೂರು ನ್ಯಾಯಾಲಯ ನಿರ್ದೋಷಿ ಎಂದು ಪರಿಗಣಿಸಿ ದೋಷಮುಕ್ತಿಗೊಳಿಸಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ನಿವಾಸಿ ಜಯರಾಮ ಗೌಡ ಆರೋಪದಿಂದ ಮುಕ್ತಗೊಂಡವರು. 2011ರ ಆ.3ರಂದು ಸಂಪ್ಯ ಪೊಲೀಸರು ಮೇನಾಲದಲ್ಲಿ ಕಾರ್ಯಾಚರಣೆ ನಡೆಸಿ ಕರ್ನಾಟಕದಿಂದ ಕೇರಳಕ್ಕೆ ಮದ್ಯಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಜಯರಾಮ ಗೌಡ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಿ ದೋಷಮುಕ್ತಿಗೊಳಿಸಿದೆ. ಆರೋಪಿಯ ಪರವಾಗಿ ವಕೀಲರಾದ ದುರ್ಗಾಪ್ರಸಾದ್ ರೈ ಕುಂಬ್ರ,ಅರಂತನಡ್ಕ ಬಾಲಕೃಷ್ಣ ರೈ, ಕೃಷ್ಣಪ್ಪ ಗೌಡ ಕಕ್ವೆ ಮತ್ತು ಅಕ್ಷಯ್ ಪಿ.ಆರ್. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News