×
Ad

ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿ, ಸಮಾಲೋಚನಾ ವೇದಿಕೆ ಮತ್ತು ಸಮಾನಾಸಕ್ತರ ಸಂಯುಕ್ತ ಸೆಭೆ

Update: 2016-09-03 19:23 IST

ಬೆಳ್ತಂಗಡಿ,ಸೆ.3:ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿ, ಸಮಾಲೋಚನಾ ವೇದಿಕೆ ಮತ್ತು ಸಮಾನಾಸಕ್ತರ ಸಂಯುಕ್ತ ಸೆಭೆಯು ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆಯಿತು.

 ಸಭಾಧ್ಯಕ್ಷತೆ ವಹಿಸಿದ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋವನಾಥ ನಾಯಕ್ ಮಾತನಾಡುತ್ತಾ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಬದಲಾವಣೆಗಳ ಹಿನ್ನ ಲೆಯಲ್ಲಿ ಟ್ರಸ್ಟ್‌ನ ಮುಂದಿನ ಕಾರ್ಯಾಚರಣೆ ಏನಿರಬೇಕು ಎಂದು ಸಲಹೆ ನೀಡಬೇಕೆಂದು ವಿನಂತಿಸಿ ಟ್ರಸ್ಟ್ ನಡೆಸುತ್ತಾ ಬಂದಿರುವ ಅಭಿಯಾನ, ಹೋರಾಟ, ಸೇವಾಕಾರ್ಯಗಳನ್ನು ಹಾಗೂ ಶೋಷಣೆಯ ವಿರುದ್ಧ, ಸಾಮಾಜಿಕ ನ್ಯಾಯಕ್ಕಾಗಿ, ಮಾನವ ಧರ್ಮದೊಂದಿಗೆ ಸಮಾಜದಲ್ಲಿ ಕೆಲಸ ಮಾಡಿರುವುದನ್ನು ವಿವರಿಸಿದರು. ಟ್ರಸ್ಟ್‌ನ 40ನೇ ವರ್ಷದ ಸಂಭ್ರಮ ರಾಜ್ಯ ಮಟ್ಟದ ಸಮಾವೇಶದ ಮಾಹಿತಿಯನ್ನು ಕಾರ್ಯದರ್ಶಿ ಜಯಪ್ರಕಾಶ್ ಭಟ್ ನೀಡಿದರು. ಈ ಕುರಿತು ವಿಚಾರ ವಿನಿಮಯ ನಡೆಯಿತು. ಈ ಸಮಾವೇಶದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದಾಗಿ ತೀರ್ಮಾನಿಸಲಾಯ್ತು.

ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ಚಿಂತಕ ಶ್ರೀ ಲಕ್ಷ್ಮಿೀಶ ತೋಳ್ಪಾಡಿ ಮಾತನಾಡಿ   ಜನರನ್ನು ಗಟ್ಟಿಗೊಳಿಸಬೇಕೇ ಹೊರತು ಗುಲಾಮಗಿರಿಗೆ ತಳ್ಳುವುದಲ್ಲ. ಸಾಮಾನ್ಯಜನ ತಮ್ಮ ಅನುದಿನದ ಬದುಕಲ್ಲಿ ತೋರಿಸುವ ಸಹಜ ಸಜ್ಜನಿಕೆಯೇ ಧರ್ಮ. ಮಠ ಮಂದಿರವನ್ನು ಅಗತ್ಯಕ್ಕಿಂತ ಜಾಸ್ತಿ ವೈಭವೀಕರಿಸಿದರೆ ಧರ್ಮಕ್ಕೆ ಅಪಾಯ ಇದೆ. ಟ್ರಸ್ಟ್ ಜನರಲ್ಲಿ ಸತ್ಯಕ್ಕಾಗಿ ಹೋರಾಟದ ಶಕ್ತಿಯನ್ನು ತುಂಬುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. ಸತ್ಯಮೇವ ಜಯತೇ ಸರಿ. ಆದರೆ ಗೆದ್ದದ್ದು ಎಲ್ಲ ಸತ್ಯವಲ್ಲ. ಆದರೆ ಸತ್ಯ ಗೆಲುತ್ತದೆಎಂದರು.

 ಕರ್ನಾಟಕ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಎಸ್. ಕುಮಾರ್ ಮಾತಾಡುತ್ತಾ ನಮ್ಮ ಒಕ್ಕೂಟದ 250ಕ್ಕೂ ಹೆಚ್ಚು ಎನ್‌ಜಿಒ, ಸಂಘಟನೆಗಳು ಟ್ರಸ್ಟ್ನ ಈ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದರು.

ವಿಚಾರವಾದಿ ಸಂಘಟಣೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ನರೇಂದ್ರ ನಾಯಕ್ ಮಾತನಾಡಿ ಧರ್ಮದ ಹೆಸರಲ್ಲಿ ಒಕ್ಟೋಪನ್ ಹಿಡಿತದ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಿ ಸಮಾಜವನ್ನು ನಿಯಂತ್ರಿಸುವ ಶೋಷಿತ ಶಕ್ತಿಯಿಂದ ಸತ್ಯವನ್ನು ಹೇಳಲಾಗದ ಸ್ಥಿತಿ ಅನ್ಯಾಯ ಅಕ್ರಮಗಳಿಗೆ ಅವಕಾಶ ಮಾಡಿಕೂಡುತ್ತದೆ. ಟ್ರಸ್ಟ್ ಸಮಾಜವನ್ನು ಸಶಕ್ತಗೊಳಿಸುವ ಕೆಲಸ ಸುದೀರ್ಘ ಕಾಲದಿಂದ ಮಾಡುತ್ತಾ ಬಂದಿದೆ. ಇದಕ್ಕೆ ಶಕ್ತಿ ಕೊಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಸಲಹಾ ಸಮಿತಿ ಸದಸ್ಯರುಗಳಾದ ಭಾರತೀಯ ಮಜ್ದೂರ್ ಸಂಘದ ರಾಜ್ಯಾದ್ಯಕ್ಷ  ಕೆ. ವಿಶ್ವನಾಥ ಶೆಟ್ಟಿ,  ಸಾಹಿತಿ ಕೆ. ಅನಂತರಾಮ ಬಂಗಾಡಿ , ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ನಿವೃತ್ತ ಲೀಡ್ ಡಿಸ್ಟ್ರಿಕ್ಟ್ ಮ್ಯಾನೆಜರ್ ಹೇಮಂತ್ ಭಿಡೆ ತಮ್ಮ ಅಭಿ್ರಾಯಗಳನ್ನು ವ್ಯಕ್ತಪಡಿಸಿದರು.

 ವೇದಿಕೆಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷೆ ವಿದ್ಯಾ ಎಸ್ ನಾಯಕ್, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಅಧ್ಷಕ್ಷೆ ಮಮ್ತಾಜ್, ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಉಮೇಶ್ ನಿರ್ಮಲ್. ಕೃಷಿಕರ ವೇದಿಕೆ ಕರ್ನಾಟಕದ ಅಧ್ಯಕ್ಷ ವಿಠಲ ಶೆಟ್ಟಿ ಪಾದೂರು, ಉಪಸ್ಥಿತರಿದ್ದರು.

ದಲಿತ ಸಂಘರ್ಷ ಸಮಿತಿ (ಪ್ರೊ.  ಕೃಷ್ಣಪ್ಪಸ್ಥಾಪಿತ)ಯ ಆರ್. ರಮೇಶ್, ಮೊಗೇರ ಜನಾಂಗ ಜಾಗೃತಿ ಟ್ರಸ್ಟ್‌ನ ಹೆಚ್.ಬಿ. ಮೋಹನ್ ಮಾಚಾರ್, ಮಲೆಕುಡಿಯರ ಸಮಾಜ ಸುಧಾರಣಾ ಟ್ರಸ್ಟ್‌ನ ಬಾಲಕೃಷ್ಣ ಮತ್ತಿತರು ಅಭಿಪ್ರಾಯ ಮಂಡಿಸಿದರು. ಉಮೇಶ್ ನಿರ್ಮಲ್ ಸ್ವಾಗತಿಸಿದರು. ಟ್ರಸ್ಟ್‌ನ ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News