ಜಿಯೋ ಪ್ರಧಾನಿ ಜಾಹೀರಾತು : ನಗೆಯುಕ್ಕಿಸಿ ಚುಚ್ಚಿದ ಲಾಲು ಪ್ರತಿಕ್ರಿಯೆ

Update: 2016-09-03 15:27 GMT

ಹೊಸದಿಲ್ಲಿ, ಸೆ. 3 : ಪ್ರಧಾನಿ ನರೇಂದ್ರ ಮೋದಿ ಅವರು ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ವ್ಯಾಪಕ ಟೀಕೆ, ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ವಿಭಿನ್ನವಾಗಿ ಇದಕ್ಕೆ ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ. 

" ಬಡವರು ಹೊಟ್ಟೆಗೆ ಡಾಟಾ ತಿನ್ನುತ್ತಾರೆಯೇ ಅಥವಾ ಆಟ ( ಗೋಧಿ ಹಿಟ್ಟು ). ಈಗ ಡಾಟಾ ಅಗ್ಗವಾಗಿ, ಆಟ ತುಟ್ಟಿಯಾಗಿದೆ. ಇದು ಇವರು ದೇಶವನ್ನು ಬದಲಾಯಿಸುತ್ತಿರುವ ರೀತಿ. ಇನ್ನು ತೀವ್ರವಾಗಿರುವ ಕಾಲ್ ದ್ರಾಪ್ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ " ಎಂದು ಲಾಲು ಶನಿವಾರ ಹಿಂದಿಯಲ್ಲಿ  ಟ್ವೀಟ್ ಮಾಡಿರುವುದು ತೀವ್ರ ಚರ್ಚೆ ಹಾಗು ನಗುವಿಗೆ ಗ್ರಾಸವಾಗಿದೆ. 

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿಯನ್ನು ತೀವ್ರವಾಗಿ ಟೀಕಿಸಿದ ಬಳಿಕ ಲಾಲು ಟೀಕೆ ಹೊರಬಿದ್ದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News