ಮದರ್ ತೆರೇಸಾರಿಗೆ ಸಂತ ಪದವಿ ಘೋಷಣೆ: ಕಾಸರಗೋಡಿನಲ್ಲಿ ಸಂಭ್ರಾಚರಣೆ

Update: 2016-09-04 07:58 GMT

ಕಾಸರಗೋಡು, ಸೆ.4: ಮದರ್ ತೆರೇಸಾರವರಿಗೆ ಸಂತ ಪದವಿ ಘೋಷಿಸುವ ಹಿನ್ನೆಲೆಯಲ್ಲಿ ಕಾಸರಗೋಡಿನ ಹಲವಡೆ ಮೆರವಣಿಗೆ, ಪ್ರಾರ್ಥನಾ ವಿಧಿ-ವಿಧಾನಗಳು ನಡೆಯುತ್ತಿವೆ.
ನಗರದ ಸೈಂಟ್ ಜೋಸೆಫ್ ದೇವಾಲಯದ ನೇತೃತ್ವದಲ್ಲಿ ಮೆರವಣಿಗೆ ಮತ್ತು ಪ್ರಾರ್ಥನೆ ನಡೆಯಿತು.
 ಮದರ್ ತೆರೇಸಾರವರ ವೇಷಭೂಷಣ ಧರಿಸಿರುವ ಪುಟಾಣಿಗಳು ಮದರ್ ತೆರೇಸಾ ರವರ ಭಾವಚಿತ್ರ, ಬೈಬಲ್, ಜಪಮಾಲೆಯನ್ನು ಹಿಡಿದು ಮೆರವಣಿಗೆಗೆ ಮೆರುಗು ನೀಡಿದರು. ಕ್ರೈಸ್ತ ಧಾರ್ಮಿಕ ಶ್ರದ್ಧಾಳುಗಳು ಭಕ್ತಿಯಿಂದ ಪಾಲ್ಗೊಂಡರು.
 ಧರ್ಮಗುರು ವಂ.ಮಾಣಿ ಮೇಲ್ವಟ್ಟಂ ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News