ಶಾಂತಿಭಂಗ ಸಾಧ್ಯತೆ ಹಿನ್ನಲೆ : ಒಬ್ಬನ ವಿರುದ್ದ ಪ್ರಕರಣ ದಾಖಲು

Update: 2016-09-04 14:49 GMT

 ಪುತ್ತೂರು,ಸೆ.4 : ಸಾರ್ವಜನಿಕ ಶಾಂತಿಭಂಗವನ್ನುಂಟು ಮಾಡುತ್ತಿರುವ ಆರೋಪದಲ್ಲಿ ಪುತ್ತೂರು ನಗರ ಪೊಲೀಸರು ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ವ್ಯಕ್ತಿಯೊಬ್ಬನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಬನ್ನೂರು ನಿವಾಸಿ ರಘುನಾಥ್ ಅವರ ಪುತ್ರ ಪ್ರಜ್ವಲ್ (26) ವಿರುದ್ದ ಸಾರ್ವಜನಿಕ ಶಾಂತಿಭಂಗವನ್ನುಂಟು ಮಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸೆಕ್ಷನ್ 110ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಗರಿಷ್ಟ ಅವಧಿಯ ತನಕ ಒಳ್ಳೆಯ ನಡತೆಗಾಗಿ ಮುಚ್ಚಳಿಕೆ ಬರೆಸಿಕೊಳ್ಳುವಂತೆ ತಾಲೂಕು ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News