ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಸಮಾವೇಶದ
Update: 2016-09-05 17:27 IST
ಕಾಸರಗೋಡು,ಸೆ. 5: ಕೇರಳದ ಕೋಯಿಕ್ಕೋಡ್ ನಲ್ಲಿ ಸೆಪ್ಟ೦ಬರ್ 23 ರಿಂದ 25 ರ ತನಕ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶದ ಪ್ರಚಾರಾರ್ಥವಾಗಿ ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ನಡೆಯುವ ಸಂಪರ್ಕ ಅಭಿಯಾನಕ್ಕೆ ಸೋಮವಾರ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ರವರು ಡಾ . ಸುರೇಶ್ ಬಾಬು ರವರಿಗೆ ಆಮಂತ್ರಣ ಪತ್ರ ನೀಡುವುದರೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು.
ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ , ಮುಖಂಡರಾದ ಪಿ . ರಮೇಶ್ , ಕೆ . ವೇಲಾಯುಧನ್ , ಎಂ . ಸಂಜೀವ ಶೆಟ್ಟಿ , ಪ್ರಮೀಳಾ ಸಿ. ನಾಯಕ್ , ರಾಮಪ್ಪ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.