ಕಾಸರಗೋಡು: ಕೀಯೂರು ಅಳಿವೆ ಬಾಗಿಲಿನಲ್ಲಿ ಮತ್ತೊಂದು ದೋಣಿ ಅಪಘಾತ
Update: 2016-09-05 17:31 IST
ಕಾಸರಗೋಡು,ಸೆ. 5: ಸೋಮವಾರ ದೋಣಿ ಸಮುದ್ರಕ್ಕಿಳಿಸುತ್ತಿದ್ದಂತೆ ಮಗುಚಿಬಿದ್ದಿದೆ. ದೋಣಿಯಲ್ಲಿದ್ದ ಹತ್ತು ಮಂದಿಯನ್ನು ಸ್ಥಳೀಯರು ರಕ್ಷಿಸಿದರು . ದೋಣಿಯಲ್ಲಿ ಕೀಯೂರು ನಿವಾಸಿಗಳಾದ ಶಶಿ (50), ರತೀಶ್ (35), ಸುರೇಶ್ (30), ಬೇಕಲ ನಿವಾಸಿಗಳಾದ ಪವೀಶ್ (28), ಚಿತ್ರನ್ (34), ನಂಬೀಶನ್(32), ಗೋಕುಲ (27) ಈದೋಣಿಯಲ್ಲಿದ್ದರು.