ಮಂಗಳವಾರ ಶಾಲಾ ಕಾಲೇಜಿಗೆ ರಜೆ ಎಂಬುದು ಸುಳ್ಳು ಸುದ್ದಿ

Update: 2016-09-12 16:43 GMT

ಮಂಗಳೂರು, ಸೆ.12: ‘‘ತಮಿಳುನಾಡು ಕನ್ನಡಿಗರ ವಾಹನ ಮೇಲೆ ದಾಳಿ ನಡೆಸಿದ ವಿವಾದ ದ ಕದಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.’’ ಎಂಬ ಸುಳ್ಳುಸುದ್ದಿಯನ್ನು ‘varthabharati.in’ನ ಹೆಸರು ಬಳಸಿಕೊಂಡು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಾರೆ. ಆದರೆ ಮಂಗಳವಾರ ಇಂತಹ ಯಾವುದೇ ರಜೆಯನ್ನು ಜಿಲ್ಲಾಧಿಕಾರಿ ಘೋಷಿಸಿಲ್ಲ. ಈ ಬಗ್ಗೆ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಕುರಿತ ಸುದ್ದಿಯೊಂದರ ಲಿಂಕ್‌ನ್ನು ದುರುಪಯೋಗ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಈ ಸುಳ್ಳುಸುದ್ದಿಯನ್ನು ವಾಟ್ಸ್‌ಆಪ್ ಮೂಲಕ ಹರಡಿದ್ದಾರೆ. ಆದರೆ ಆ ಲಿಂಕ್ ಕ್ಲಿಕ್ ಮಾಡಿದರೆ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗುತ್ತದೆ.

ಮಂಗಳವಾರ ಜಿಲ್ಲಾಧಿಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ ಎಂದು ‘varthabharati.in’ ಯಾವುದೇ ವರದಿ ಪ್ರಕಟಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News