ವಿಟ್ಲ: ಜುಗಾರಿ ಅಡ್ಡೆಗೆ ದಾಳಿ; ನಾಲ್ವರ ಬಂಧನ

Update: 2016-09-14 13:22 GMT

ಬಂಟ್ವಾಳ, ಸೆ.14: ವಿಟ್ಲ ಕಾಲೇಜಿನ ಹಿಂಬದಿಯ ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.

ಇಲ್ಲಿನ ಕಡಂಬು ನಿವಾಸಿಗಳಾದ ಸತೀಶ್ ಶೆಟ್ಟಿ(31), ರಾಜೇಶ್ ನಲಿಕೆ(25), ಕೇಪು ಗ್ರಾಮದ ದೇವಮೂಲೆ ನಿವಾಸಿ ತಾರಾನಾಥ ಗೌಡ(38), ಚಂದಳಿಕೆ ನಿವಾಸಿ ದಿವಕರ ಪೂಜಾರಿ(30) ಬಂಧಿತರು.

ಜುಗಾರಿ ಅಡ್ಡೆಯ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಠಾಣೆ ಎಸೈ ಪ್ರಕಾಶ್ ದೇವಾಡಿಗ ಮತ್ತು ಅವರ ಸಿಬ್ಬಂದಿಯಾದ ಬಾಲಕೃಷ್ಣ, ಪ್ರವೀಣ್ ರೈ, ರಮೇಶ, ಪ್ರವೀಣ್ ಕುಮಾರ್, ಲೋಕೇಶ ಈ ಕಾರ್ಯಾಚರಣೆ ನಡೆಸಿದ್ದಾರೆ. ಆಟಕ್ಕೆ ಬಳಸಿದ್ದ 1,630 ರೂ. ನಗದನ್ನೂ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News