ಜೀಪ್‌ಗೆ ಲಾರಿ ಢಿಕ್ಕಿ: ಐದು ಮಂದಿಗೆ ಗಾಯ

Update: 2016-09-14 13:37 GMT

ಉಪಿನಂಗಡಿ, ಸೆ,14: ಲಾರಿಯೊಂದು ಜೀಪ್‌ಗೆ ಢಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ.

ಘಟನೆಯಿಂದ ಜೀಪಿನಲ್ಲಿದ್ದ ದಿವಾಕರ ಶೆಟ್ಟಿ (48), ನವಾಝ್ (38) ಹೆನ್ರಿ ಡಿಸೋಜ (45) ಹಾಗೂ ಶುಭಂಕರ (28) ಗಾಯಗೊಂಡಿದ್ದು, ಇವರನ್ನು ಉಪ್ಪಿನಂಗಡಿ, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯೋರ್ವರೂ ಈ ಸಂದರ್ಭ ಗಾಯಗೊಂಡಿದ್ದು, ಅವರು ಹೊರರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News