ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟ ಖಂಡು

Update: 2016-09-16 09:55 GMT

ಹೊಸದಿಲ್ಲಿ, ಸೆ.16: ಅರುಣಾಚಲ ಪ್ರದೇಶದಲ್ಲಿ  ಮುಖ್ಯ ಮಂತ್ರಿ  ಪೇಮ ಖಂಡು ಕಾಂಗ್ರೆಸ್‌ಗೆ ವಿದಾಯ ಹೇಳಿ  ಬಿಜೆಪಿ ಜೊತೆ ಕೈಜೋಡಿಸುವುದರೊಂದಿಗೆ ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆಯಾಗಿದೆ.
ಬಿಜೆಪಿಯ ಆಪರೇಶನ್ ಕಮಲಕ್ಕೆ ಕಾಂಗ್ರೆಸ್ ತತ್ತರಿಸಿದೆ. ಕಾಂಗ್ರೆಸ್ ನ 44 ಶಾಸಕರುಗಳ ಪೈಕಿ ಮುಖ್ಯ ಮಂತ್ರಿ ಖಂಡು ಸೇರಿದಂತೆ 43 ಎಂಎಲ್‌ಎಗಳು  ಬಿಜೆಪಿಯ ಘಟಕ ಪಕ್ಷ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಪ್ರದೇಶ ಸೇರುವುದರೊಂದಿಗೆ ಕಾಂಗ್ರೆಸ್‌ನಲ್ಲಿ ಓರ್ವ ಶಾಸಕ ಮಾತ್ರ ಉಳಿಯುವಂತಾಗಿದೆ.  ಮಾಜಿ ಮುಖ್ಯಮಂತ್ರಿ ನಾಬಮ್ ಟುಕಿ  ಕಾಂಗ್ರೆಸ್ ನಲ್ಲಿ ಉಳಿದ ಎಕೈಕ ಶಾಸಕ. 

 ಅರುಣಾಚಲ ವಿಧಾನಸಭೆಯಲ್ಲಿ ಒಟ್ಟು 60 ಸದಸ್ಯರಿದ್ದಾರೆ ಕಾಂಗ್ರೆಸ್ 44 ಸ್ಥಾನಗಳನ್ನು ಹೊಂದಿತ್ತು. ಬಿಜೆಪಿ ಮಿತ್ರಪಕ್ಷದ 11 ಸದಸ್ಯರಿದ್ದಾರೆ. ನ್ಯಾಯಾಂಗ ಹೋರಾಟದಲ್ಲಿ ಕಾಂಗ್ರೆಸ್ ಗೆದ್ದರೂ, ಇದೀಗ ಅಧಿಕಾರ ಕಳೆದುಕೊಳ್ಳುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News