ಕೆಪಿಎಲ್ ಪಂದ್ಯಾವಳಿ ಸೆ.17ರಿಂದ ಹುಬ್ಬಳ್ಳಿಯಲ್ಲಿ ಆರಂಭ: ಶಾಸಕ ಮೊಯ್ದಿನ್ ಬಾವ

Update: 2016-09-16 15:28 GMT

ಮಂಗಳೂರು, ಸೆ.16: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಬೇಕಿದ್ದ ಕೆಪಿಎಲ್ ಪಂದ್ಯಾವಳಿ ಹುಬ್ಬಳ್ಳಿಯಲ್ಲಿ ಸೆ.17 ರಿಂದ ನಡೆಯಲಿದ್ದು ಮೊದಲ ದಿನದ ಪಂದ್ಯಾಟದಲ್ಲಿ ಮಧ್ಯಾಹ್ನ 1.30ಕ್ಕೆ ಮಂಗಳೂರು ಯುನೈಟೆಡ್ ತಂಡ ಮೈಸೂರು ವಾರಿಯರ್ಸ್‌ ಜೊತೆಗೆ ಸೆಣಸಲಿದೆ ಎಂದು ಶಾಸಕ ಮೊಯ್ದಿನ್‌ಬಾವ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಪಂದ್ಯಾಟದಲ್ಲಿ ಸೆ.21ರಂದು ಬಿಜಾಪುರ ಬುಲ್ಸ್, ಸೆ.22 ರಂದು ನಮ್ಮ ಶಿವಮೊಗ್ಗ ತಂಡ, ಸೆ.24 ರಂದು ಬಳ್ಳಾರಿ ಟಸ್ಕರ್ಸ್‌, ಸೆ.25ರಂದು ಹುಬ್ಳಿ ಟೈಗರ್ಸ್‌ ಮತ್ತು ಎರಡನೆ ಹಂತದಲ್ಲಿ ಬೆಳಗಾವಿ ಪ್ಯಾಂಥರ್ಸ್‌ ನೊಂದಿಗೆ ಸೆ.29 ರಂದು ಮಂಗಳೂರು ಯುನೈಟೆಡ್ ತಂಡದೊಂದಿಗೆ ಪಂದ್ಯಾಟ ನಡೆಯಲಿದ್ದು ಕರುಣ್ ನಾಯರ್ ಅವರು ನಾಯಕರಾಗಿ, ಸಿ.ಎಂ. ಗೌತಮ್ ಉಪನಾಯಕರಾಗಿರಲಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಕರುಣ್ ನಾಯರ್ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News