ಕೆ.ಜೆ.ಜಾರ್ಜ್ ಮತ್ತೆ ಸಂಪುಟ ಸೇರಿದರೆ ಕಾಂಗ್ರೆಸ್ ಖತಂ: ಪೂಜಾರಿ ಭವಿಷ್ಯ!

Update: 2016-09-18 08:45 GMT

ಮಂಗಳೂರು, ಸೆ.18: ‘‘ಮಾಜಿ ಸಚಿವ ಕೆ.ಜೆ. ಜಾರ್ಜ್‌ರವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಅಲ್ಲಿಗೆ ಕಾಂಗ್ರೆಸ್ ಪಕ್ಷದ ಕತೆ ಮುಗಿಯಿತು....’’ ಹೀಗೆಂದು ಭವಿಷ್ಯ ನುಡಿದವರು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು.
ಕುದ್ರೋಳಿ ಕ್ಷೇತ್ರದಲ್ಲಿಂದು ಉರುಳುಸೇವೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಜೆ. ಜಾರ್ಜ್‌ರಿಗೆ ಸಿಐಡಿ ಕ್ಲೀನ್‌ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು. ‘‘ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದೇ ಆರೋಪಿಗಳನ್ನು ಬಚಾವ್ ಮಾಡಲು. ಆದರೆ ಇನ್ನೆರಡು ವರ್ಷಗಳ ಕಾಲ ಮಾತ್ರ ಈ ಪ್ರಕರಣದ ಆರೋಪಿಗಳನ್ನು ಕಾಪಾಡಬಹುದು. ಆಮೇಲೆ ಬರುವ ಹೊಸ ಸರಕಾರ ಈ ಬಗ್ಗೆ ಮರುತನಿಖೆ ನಡೆಸಬಹುದು’’ ಎಂದು ಅವರು ಹೇಳಿದರು. ‘‘ಡಿವೈಎಸ್ಪಿ ಗಣಪತಿಯ ಮರಣಪೂರ್ವ ಹೇಳಿಕೆಯನ್ನು ತನಿಖೆಯ ವೇಲೆ ಪರಿಗಣಿಸಬೇಕು. ಈ ಪ್ರಕರಣವು ಸುಪ್ರೀಂ ಕೋರ್ಟಿನ ಮೂಲಕ ತನಿಖೆ ಆಗಬೇಕು’’ ಎಂದು ಜನಾರ್ದನ ಪೂಜಾರಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News