ಕೋಡಪದವು: ಇಶಾರ ಚಂದಾ ಅಭಿಯಾನಕ್ಕೆ ಚಾಲನೆ
Update: 2016-09-18 16:02 IST
ವಿಟ್ಲ, ಸೆ.18: ಎಸ್ಸೆಸ್ಸೆಫ್ ಕೋಡಪದವು ಶಾಖೆಯ ವತಿಯಿಂದ ‘ಇಶಾರ’ ಪತ್ರಿಕೆಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕುಕ್ಕಿಲ ತಾಜುಲ್ ಉಲಮಾ ಮಂಝಿಲ್ನಲ್ಲಿ ಹೈದರ್ ಅಲಿಯವರು ಕುಂದಾಪುರ ಕೋಡಿಯ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಮದನಿಯವರಿಗೆ ಇಶಾರ ಚಂದಾ ನೀಡುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಉಮರ್ ಅಮ್ಜದಿ ಕುಕ್ಕಿಲ, ಇಬ್ರಾಹೀಂ ಕೋಡಪದವು, ಇಬ್ರಾಹೀಂ ಖಲೀಲ್ ಜಿಕೆರೆ, ಹುಸೈನ್ ಸಅದಿ ಕುಕ್ಕಿಲ ಮತ್ತಿತರರು ಉಪಸ್ಥಿತರಿದ್ದರು.