ಕಾಸರಗೋಡು: ವಿದ್ಯುತ್ ಶಾಕ್ ತಗಲಿ ಕೆಎಸ್‌ಇಬಿ ಕಾರ್ಮಿಕ ಮೃತ್ಯು

Update: 2016-09-20 12:06 GMT

ಕಾಸರಗೋಡು, ಸೆ.20: ವಿದ್ಯುತ್ ಶಾಕ್ ತಗಲಿ ಕೆಎಸ್‌ಇಬಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಕಾಸರಗೋಡು ಮನ್ನಿಪ್ಪಾಡಿ ಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಮುಟ್ಟತ್ತೋಡಿ ಹಿದಾಯತ್ ನಗರದ ನಿವಾಸಿ ಅಬ್ದುಲ್ ಗಫೂರ್ (45) ಎಂದು ಗುರುತಿಸಲಾಗಿದೆ.

ಮನ್ನಿಪ್ಪಾಡಿ ಯಲ್ಲಿ ವಿದ್ಯುತ್ ಲೈನ್‌ನ ಬಳಿ ಮರದ ರೆಂಬೆ ಕಡಿಯುತ್ತಿದ್ದಾಗ ಮೇಲ್ಗಡೆ ಹಾದು ಹೋಗಿದ್ದ ಹೈಟೆನ್ಷನ್ ಲೈನ್‌ಗೆ ತಗಲಿ ಈ ಘಟನೆ ನಡೆದಿದೆ. ಕೂಡಲೇ ಜೊತೆಗಿದ್ದ ಉಳಿದ ಕಾರ್ಮಿಕರು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News