×
Ad

ಸೆ.25: ಕೃತಿ ಬಿಡುಗಡೆ

Update: 2016-09-20 23:38 IST

ಮಂಗಳೂರು, ಸೆ.20: ಸೈಯದ್ ಮೆಹಬೂಬ್ ಶಾ ಖಾದ್ರಿ ಮರಾಠಿಯಲ್ಲಿ ರಚಿಸಿದ ‘ದಾಗದಾವಾರ್ಚಿ ಪೆರಾನು’ ಕೃತಿಯನ್ನು ಅಂಜಲಿ ಪಟವರ್ಧನ್ ಆಂಗ್ಲ ಭಾಷೆಗೆ ಅನುವಾದಿಸಿದ್ದು, ಅದನ್ನೀಗ ನಾಡೋಜ ಸಾರಾ ಅಬೂಬಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಎಂಬ ಹೆಸರಿನ ಈ ಕೃತಿಯ ಬಿಡುಗಡೆ ಸಮಾರಂಭವು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ವತಿಯಿಂದ ಸೆ.25ರಂದು ಮಧ್ಯಾಹ್ನ 2:30ಕ್ಕೆ ನಡೆಯಲಿದೆ.
ಲೇಖಕಿ ಡಾ.ಸರ್ಫ್‌ರಾಝ್ ಚಂದ್ರಗುತ್ತಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಮುಮ್ತಾಝ್ ಬೇಗಂ ಕೃತಿಯ ಪರಿಚಯ ಮಾಡಲಿದ್ದಾರೆ. ಸಂಘದ ಅಧ್ಯಕ್ಷೆ ಡಾ.ಶೈಲಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News