ಏಕರೂಪದ ಮರಳು ನೀತಿ ಜಾರಿಗೊಳಿಸಲು ಒತ್ತಾಯ
Update: 2016-09-20 23:39 IST
ಕುಂದಾಪುರ, ಸೆ.20: ಕರಾವಳಿ ಜಿಲ್ಲೆಗಳಲ್ಲಿ ಸಿಆರ್ಝೆಡ್ ಹಾಗೂ ನಾನ್ ಸಿಆರ್ಝೆಡ್ ಪ್ರದೇಶಗಳು ಒಳಪಡುವುದರಿಂದ ಈ ಎರಡೂ ಪ್ರದೇಶಗಳಿಗೆ ಅನ್ವಯವಾಗುವಂತೆ ಏಕರೂಪದ ಮರಳು ನೀತಿಯ ಅಗತ್ಯವಿದ್ದು, ಅದನ್ನು ಜಾರಿಗೊಳಿಸಬೇಕು ಎಂದು ಮಾಜಿ ಸಂಸದ ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣಿ ಖಾತೆ ಸಚಿವ ವಿನಯ ಕುಲಕರ್ಣಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.