ಇಂದಿನ ಕಾರ್ಯಕ್ರಮ

Update: 2016-09-21 18:14 GMT

 ಪ್ರತಿಭಟನೆ, ರ್ಯಾಲಿ: ಉಡುಪಿ ಜಿಲ್ಲೆಯಲ್ಲಿರುವ ಮರಳು ಸಮಸ್ಯೆಯ ಕುರಿತು ಸರಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಪ್ರತಿಭಟನೆಯ ಅಂಗವಾಗಿ ರ್ಯಾಲಿ, ಬಹಿರಂಗ ಸಭೆ. ಸಮಯ: ಬೆಳಗ್ಗೆ 9:30ರಿಂದ. ಸ್ಥಳ: ಉಡುಪಿ ಜೋಡುಕಟ್ಟೆಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಎದುರು, ಮಣಿಪಾಲ. ವಿಶ್ವ ಮರಗುಳಿತನ ದಿನಾಚರಣೆ: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ವಿಶ್ವ ಮರೆಗುಳಿತನ ದಿನಾಚರಣೆ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ.
ಅಂಚೆ ಅದಾಲತ್: ಉಡುಪಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ತ್ರೈಮಾಸಿಕ ಅಂಚೆ ಅದಾಲತ್. ಅಂಚೆ ಗ್ರಾಹಕರಿಂದ ದೂರು ಮತ್ತು ಸಲಹೆಗಳ ಸ್ವೀಕಾರ. ಸಮಯ: ಅಪರಾಹ್ನ 3ಕ್ಕೆ. ಸ್ಥಳ: ಅಂಚೆ ಅಧೀಕ್ಷಕರ ಕಚೇರಿ, ಉಡುಪಿ. ಪೇಜಾವರ ಶ್ರೀ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪರಾಹ್ನ 3ರಿಂದ 5:30ರವರೆಗೆ ಭಾಗವತ ಸಪ್ತಾಹ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ ಪ್ರವಚನ, ಸಂಜೆ 5:45ರಿಂದ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ರಂಗನಾಥ ಕಟ್ಟಿಯವರಿಂದ. ರಾತ್ರಿ 7ರಿಂದ ರಾಜಾಂಗಣದಲ್ಲಿ ಬೆಂಗಳೂರಿನ ರೂಪಶ್ರೀ ಪ್ರಭಂಜನರಿಂದ ದಾಸವಾಣಿ.
ಕ್ಯಾಂಪಸ್ ಸಂದರ್ಶನ: ಕುಂದಾಪುರ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಸಂದರ್ಶನ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ, ಮೂಡ್ಲಕಟ್ಟೆ ಕುಂದಾಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News