×
Ad

ಪುತ್ತೂರು: ಆಭರಣ ತಯಾರಿ ಅಂಗಡಿಯಿಂದ ಕಳವು

Update: 2016-09-22 20:16 IST

ಪುತ್ತೂರು, ಸೆ.22: ಆಭರಣ ತಯಾರಿ ಅಂಗಡಿಯ ಒಳನುಗ್ಗಿದ ಕಳ್ಳರು ಸುಮಾರು 15 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆಸಿದ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಕೊರ್ಟು ರಸ್ತೆಯಲ್ಲಿರುವ ಸಂದೀಪ್ ಆಚಾರ್ಯ ಎಂಬವರ ಅಂಗಡಿಯ ಬೀಗ ಮುರಿದು ಅಂಗಡಿಯ ಡ್ರಾಯರ್‌ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ. ಸಂದೀಪ್ ಆಚಾರ್ಯ ಗುರುವಾರ ಅಂಗಡಿಗೆ ಆಗಮಿಸಿದಾಗ ಕಳವಾದ ಸಂಗತಿ ತಿಳಿದು ಬಂದಿತ್ತು.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News