×
Ad

ಅ.1ರಂದು ವರ್ಕಾಡಿಯಲ್ಲಿ ಸ್ನೇಹ ಸಮ್ಮಿಲನ

Update: 2016-09-26 21:52 IST

ಮಂಜೇಶ್ವರ, ಸೆ.26: ಇಲ್ಲಿನ ನಾಗರಿಕ ಕ್ರಿಯಾ ವೇದಿಕೆ ಮಜೀರ್‌ಪಳ್ಳ ಹಾಗೂ ಕಲ್ಲೂರು ಎಜುಕೇಶನಲ್ ಟ್ರಸ್ಟ್ ಕಾರವಾರ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 35 ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ವಿಶ್ವಪ್ರಭ ಹಾಲ್ ಸುಂಕದಕಟ್ಟೆ ವರ್ಕಾಡಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಅಪರಾಹ್ನ 2 ಗಂಟೆಗೆ ಶಾಲಾ ಮಕ್ಕಳಿಗೆ ಕ್ವಿಝ್ ಹಾಗೂ ಪ್ರಬಂಧ ಸ್ಪರ್ಧೆ ನಡೆಯಲಿದೆ.

ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಲಾಂ ವರ್ಕಾಡಿ ಸ್ವಾಗತಿಸಲಿದ್ದಾರೆ. ಸಿರಿಗನ್ನಡ ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಾಗರೀಕ ಕ್ರಿಯಾ ವೇದಿಕೆಯ ಅಧ್ಯಕ್ಷ ಕಲ್ಲೂರು ಇಬ್ರಾಹೀಂ ಹಾಜಿರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುರ್ರಝಾಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬೋಳಂತಕೋಡಿ ವೇದಮೂರ್ತಿ ರಾಮ ಭಟ್ ವಿದ್ವಾನ್, ಇಬ್ರಾಹೀಂ ಬಾತಿಷಾ ಅಲ್ ಅಝ್‌ಹರಿ ತಂಙಳ್ ಆನೆಕಲ್ಲು, ವರ್ಕಾಡಿ ಚರ್ಚ್ ಫಾದರ್ ಫ್ರಾನ್ಸಿಸ್ ರೋಡಿಗ್ರಸ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ, ಪಂಚಾಯುತ್ ಅಧ್ಯಕ್ಷರಾದ ಶಂಶಾದ್ ಶುಕೂರ್, ಅಬ್ದುಲ್ ಮಜೀದ್ ಬಿ.ಎ., ಕಾಸರಗೋಡು ಜಿ.ಪಂ. ಮಾಜಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ. ರಾಜನ್, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಟಿ. ಧೂಮಪ್ಪ ಶೆಟ್ಟಿ, ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ, ವರ್ಕಾಡಿ ಪಂಚಾಯತ್‌ನ ಮಾಜಿ ಕಾರ್ಯದರ್ಶಿ ಡಿ.ಬೂಬ, ಮಾಜಿ ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ವರ್ಕಾಡಿ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಹಮತ್ ರಝಾಕ್, ಸಿಂಡಿಕೇಟ್ ಬ್ಯಾಂಕ್ ಶಾಖಾ ಮ್ಯಾನೇಜರ್ ಜೋಸ್ ಮೇರಿ, ಪಂಚಾಯತ್ ಸದಸ್ಯರಾದ ವಸಂತ, ಸಿ. ನಾರಾಯಣ, ಎ.ಎಂ. ಉಮ್ಮರ್ ಕುಂಞ, ಬಿ.ಮುಹಮ್ಮದ್ ಕುಂಞ, ಪಿ.ಬಿ .ಅಬೂಬಕರ್, ಉಮ್ಮರ್ ಒಡಂಗಳ, ಆರೀಫ್ ಮಚ್ಚಂಪಾಡಿ, ಅಬ್ದುಲ್ ಕರೀಂ, ದಿವಾಕರ್ ಎಸ್.ಜೆ.ಡಿ.ಎ. ಮುಹಮ್ಮದ್, ಮಾಂಕೋಡಿ ಮುಹಮ್ಮದ್, ಪಾವುಲ್ ಡಿಸೋಜ ಮೊದಲಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 7 ಮಂದಿ ನಿವೃತ್ತ 7 ಮುಖ್ಯೋಪಾಧ್ಯಾಯರಿಗೆ, ವೈದ್ಯಕೀಯ, ಕೃಷಿ, ಕಾರ್ಮಿಕ, ವ್ಯಾಪಾರ ಇನ್ನಿತರ ರಂಗಗಳಲ್ಲಿ ಸೇವೆ ಸಲ್ಲಿದ ಒಟ್ಟು 35 ಮಂದಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮವೂ ಕೂಡಾ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News