ವಿಟ್ಲ ಡಿವಿಷನ್ ಕ್ಯಾಂಪಸ್ ಪ್ರತಿಭೋತ್ಸವ ಸಂಪನ್ನ

Update: 2016-09-27 05:30 GMT

ವಿಟ್ಲ, ಸೆ.27: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಟ್ಲ ಕ್ಯಾಂಪಸ್  ಡಿವಿಷನ್ ವತಿಯಿಂದ ಪ್ರತಿಭೋತ್ಸವ ಕಾರ್ಯಕ್ರಮ ಶನಿವಾರ  ಮಂಗಳಪದವು ಬಿಲಾಲ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಮಂಗಳಪದವು ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಧ್ವಜಾರೋಹಣಗೈದರು. ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಕೋಡಪದವು ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಮಂಗಳಪದವು ಸೆಕ್ಟರ್ ಅಧ್ಯಕ್ಷ ಹಾಜಿ ಅಬ್ದುರ್ರಝಾಕ್ ಸಖಾಫಿ ಕೆಲಿಂಜ ಪ್ರಾಸ್ತವಿಕ ಭಾಷಣ ಮಾಡಿದರು.

ಬಳಿಕ ಅಳಿಕೆ, ವಿಟ್ಲ, ಕನ್ಯಾನ ಮತ್ತು ಅಡ್ಯನಡ್ಕ ಕ್ಯಾಂಪಸ್ ಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ವಿಷಯಗಳಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ವಿಟ್ಲ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ವಿಟ್ಲ ಇನ್ಸ್ ಫೇರ್ ಕಂಪ್ಯೂಟರ್ ಕಾಲೇಜು ರನ್ನರ್ ಅಪ್ ಸ್ಥಾನ ಗಳಿಸಿತು. ಅಳಿಕೆಯ ಉಮರುಲ್ ಫಾರೂಕ್ ಮತ್ತು ವಿಟ್ಲದ ಮಸೂದ್ ಕ್ರಮವಾಗಿ ಜೂನಿಯರ್ ಮತ್ತು ಸೀನಿಯರ್ ವಿಭಾಗದ ವೈಯುಕ್ತಿಕ ಪ್ರಶಸ್ತಿ ಪಡೆದರು.

ಡಿವಿಷನ್ ಅಧ್ಯಕ್ಷ ಎಂ.ಕೆ.ಎಂ. ಕಾಮಿಲ್ ಸಖಾಫಿ ಕೊಡಂಗಾಯಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಪ್ರತಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಉದ್ಘಾಟಿಸಿ, ವಿಜೇತರಿಗೆ ಟ್ರೋಪಿ ವಿತರಿಸಿದರು. ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅಬೂಬಕರ್ ಒಕ್ಕೆತ್ತೂರು, ಅಬ್ದುರ್ರಹ್ಮಾನ್ ನೆಲ್ಲಿಗುಡ್ಡೆ, ವೀರಕಂಭ ಪಂಚಾಯತ್ ಸದಸ್ಯರಾದ ಉಬೈದ್ ಮತ್ತು ಅಬ್ಬಾಸ್ ವಿ.ಕೆ ,ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಶರೀಫ್ ಕೊಡಂಗೆ, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಇಸ್ಮಾಯೀಲ್ ಮಾಸ್ಟರ್, ಶಾಕಿರ್ ಹಾಜಿ ಪುತ್ತೂರು, ಎಸ್ ವೈಎಸ್ ನಾಯಕರಾದ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಇಬ್ರಾಹೀಂ ಮುಸ್ಲಿಯಾರ್, ಅಬ್ದುಲ್ ಮಜೀದ್ ಮದನಿ ಕುಡ್ತಮುಗೇರು, ಕೆ.ಎ. ಹಮೀದ್ ಹಾಜಿ ಕೊಡಂಗಾಯಿ ಮುಂತಾದವರು ಮಾತನಾಡಿದರು.

ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಶರಫಿ ಮೂಡಂಬೈಲು, ಎನ್.ಕೆ.ಅಬ್ದುಲ್ ಖಾದರ್ ಸಅದಿ ಕನ್ಯಾನ, ಅಬೂಬಕರ್ ಸಖಾಫಿ ಹಿಮಮಿ, ಡಿವಿಷನ್ ಉಪಾಧ್ಯಕ್ಷ ಅಬ್ದುರ್ರಹೀಂ ಸಖಾಫಿ, ಅಶ್ರಫ್ ಸಖಾಫಿ ಕನ್ಯಾನ, ಕಾರ್ಯದರ್ಶಿಗಳಾದ ಅಬೂಬಕರ್ ಸಖಾಫಿ ವಿ.ಎಂ. ,ಅಬ್ದುರ್ರಝಾಕ್ ಕೆಲಿಂಜ, ಕೋಶಾಧಿಕಾರಿ ಅಬ್ದುಲ್ ಅಝೀಝ್ ಮದನಿ ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಸ್ವಾಗತಿಸಿ, ಕ್ಯಾಂಪಸ್ ಕಾರ್ಯದರ್ಶಿ ಝಿಯಾದ್ ಮಾಸ್ಟರ್ ಬೈರಿಕಟ್ಟೆ ವಂದಿಸಿದರು.
ಜಂಶಾದ್ ಕಂಬಳಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News