ತನ್ನ ಕಿವಿಗೆ ಕಚ್ಚಿದ ನಾಯಿಗೆ ಗತಿ ಕಾಣಿಸಿದ ಮಹಾಶಯ !

Update: 2016-09-27 10:37 GMT

ತಿರೂರ್, ಸೆ. 27: ತಿರೂರಿನ ಸಮೀಪ ಪೆರಿಂದಲ್ಲೂರಿನಲ್ಲಿ ಕಿವಿಗೆ ಕಚ್ಚಿದ ಬೀದಿನಾಯಿಯನ್ನು ಗಾಯಗೊಂಡ ವ್ಯಕ್ತಿ ಬಡಿಗೆಯಿಂದ ಬಡಿದು ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಣ್ಣೂರಿನ ಆನ್ಸ್ ಹೋಟೆಲ್‌ನ ಬಾಣಸಿಗ ಪ್ರಭಾಕರ(63)ರನ್ನು ಸೋಮವಾರ ಸಂಜೆ 6:30ಕ್ಕೆ ಬೀದಿ ನಾಯಿ ಕಚ್ಚಿತ್ತು. ಕೆಲಸ ಮುಗಿಸಿ ಪೆರಿಂದಲ್ಲೂರಿನ ಕುರಿಕ್ಕಲ್ ಪಡಿಯಿಲ್‌ನ ತನ್ನ ಮನೆಗೆ ಹೊಗುವಾಗ ಬೀದಿ ನಾಯಿ ದಾಳಿ ನಡೆಸಿತ್ತು.

ಕಾಲಿನ ತೊಡೆಗೆ ಮೊದಲು ನಾಯಿಕಚ್ಚಿದೆ. ನಂತರ ಅದು ಕಚ್ಚದಂತೆ ಪ್ರಭಾಕರ ನಾಯಿಯನ್ನು ಹಿಡಿದಾಗ ಕಿವಿಯನ್ನುಕಚ್ಚಿ ಎಳೆದಿದೆ. ನಂತರ ಅವರ ಇಡೀ ದೇಹವನ್ನು ಕಚ್ಚಿ ಗಾಯಗೊಳಿಸಿತ್ತು. ಆದರೂ ಹೆದರದೆ ಪ್ರಭಾಕರ ಬೀದಿ ನಾಯಿಯನ್ನು ದಂಡದಿಂದ ಹೊಡೆದು ಕೊಂದು ಹಾಕಿದ್ದಾರೆ. ಬೀದಿನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮೊದಲು ತಿರೂರ್ ಜನರಲ್ ಆಸ್ಪತ್ರೆಗೂ ಅಲ್ಲಿಂದ ನಂತರ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಾಸ್ಪತ್ರೆಗೂ ಸೇರಿಸಿಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News