ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳರು

Update: 2016-09-27 10:42 GMT

ಕಾಸರಗೋಡು, ಸೆ.27: ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆಯ ಕುತ್ತಿಗೆಯಲ್ಲಿದ್ದ ಮೂರುವರೆ ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಆದೂರಿನ ದೇಲಂಪಾಡಿ ಪರಪ್ಪದಲ್ಲಿ ನಡೆದಿದೆ.

ಮುಳ್ಳೇರಿಯಾ ಪೇಟೆಗೆ ಬಂದು ಮರಳುತ್ತಿದ್ದ ವಿಮಲಾ (30) ಎಂಬವರ ಕುತ್ತಿಗೆಯಲ್ಲಿದ್ದ ಸರ ಅಪಹರಿಸಲಾಗಿದೆ. ವಿಮಲಾ ಅವರು ಬಸ್‌ನಿಂದ ಇಳಿದು ಒಳದಾರಿಯಾಗಿ ತೆರಳುತ್ತಿದ್ದಂತೆ ಬೈಕ್‌ನಲ್ಲಿ ಬಂದ ಇಬ್ಬರು ಸರ ಎಳೆದು ಪರಾರಿಯಾಗಿದ್ದಾರೆ.

ಆದೂರು ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News