ಇಂದಿನ ಕಾರ್ಯಕ್ರಮ

Update: 2016-09-27 18:23 GMT

ವಿಶೇಷ ಗ್ರಾಮ ಸಭೆ: ಬಾರಕೂರು ಗ್ರಾಪಂ ವ್ಯಾಪ್ತಿಯ ವಸತಿ ಹಾಗೂ ನಿವೇಶನ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಗತಿಯ ಕುರಿತು ವಿಶೇಷ ಗ್ರಾಮ ಸಭೆ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ಗ್ರಾಪಂ ಸಭಾಂಗಣ, ಬಾರಕೂರು. ಪೇಜಾವರ ಶ್ರೀ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ರಿಂದ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಮುಂಬೈನ ವಿದ್ವಾನ್ ರಾಮದಾಸ ಆಚಾರ್ಯರಿಂದ ಉಪನ್ಯಾಸ, ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ರಾತ್ರಿ 7ರಿಂದ ರಾಜಾಂಗಣದಲ್ಲಿ ಬೆಂಗಳೂರಿನ ಅರ್ಚನಾ ಕುಲಕರ್ಣಿ ಇವರಿಂದ ದಾಸವಾಣಿ.
ಅಷ್ಟಾವಧಾನ: ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಅಷ್ಟಾವಧಾನ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರಿಂದ. ಸಮಯ: ಅಪರಾಹ್ನ 1:15ಕ್ಕೆ. ಸ್ಥಳ: ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್, ಕುಂದಾಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News