ಶ್ರೀಮಧ್ವರ ಸಪ್ತ ಶತಮಾನೋತ್ಸವ

Update: 2016-09-28 18:26 GMT

ಉಡುಪಿ, ಸೆ.28: 13ನೆ ಶತಮಾನದಲ್ಲಿ ನಾಡಿನಲ್ಲಿ ಭಕ್ತಿ ಸಿದ್ಧಾಂತವನ್ನು ಪ್ರಸಾರ ಮಾಡಿದ ಜಗದ್ಗುರು ಮಧ್ವಾಚಾರ್ಯರು ನಮ್ಮನ್ನಗಲಿ 2017ರ ಫೆ.5ಕ್ಕೆ 700 ವರ್ಷಗಳಾಗಲಿವೆ. ಅವರ ಈ ಸಪ್ತ ಶತಮಾನೋತ್ಸವವನ್ನು ವೈಭವದಿಂದ ನಡೆಸಲು ಸಂಕಲ್ಪಿಸಿದ್ದೇವೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2017ರ ಜನವರಿ 28ರಿಂದ ಫೆ.6ರವರೆಗೆ 10ದಿನಗಳ ಈ ವಿಶೇಷ ಮಹೋತ್ಸವ ನಡೆಯಲಿದ್ದು, ಮಹೋತ್ಸವದ ಅಂಗವಾಗಿ ಭಕ್ತರಿಂದ ಪಾರಾಯಣ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಜ.28ರಿಂದ ಫೆ.5ರ ಮಧ್ವನವಮಿಯವರೆಗೆ 9 ದಿನಗಳಲ್ಲಿ ಉಡುಪಿಯ ರಾಜಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ಸಾಮೂಹಿಕ ಪಾರಾಯಣ ನಡೆಯಲಿದ್ದು, ಫೆ.6ರಂದು ಸುಧಾಮಂಗಳದ ಜೊತೆಗೆ ಈ ಸಮಾರಂಭ ಮುಕ್ತಾಯಗೊಳ್ಳುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News