ಯೂತ್ ವೆಲ್‌ಫೇರ್ ಬೆಳ್ಳಿಹಬ್ಬದ ಪ್ರಯುಕ್ತ ಸ್ವಚ್ಛತಾ ಅಭಿಯಾನ

Update: 2016-10-02 18:16 GMT

ಕಿನ್ಯ, ಅ.2: ಸ್ವಚ್ಛ ಗ್ರಾಮ ಅಭಿವೃದ್ಧಿಯ ಸಂಕೇತವಾಗಿದ್ದು, ಗ್ರಾಪಂ ನಿರ್ವಹಿಸಬೇಕಿದ್ದ ಕೆಲಸವನ್ನು ಸಂಘಟನೆಯೊಂದು ಬೆಳ್ಳಿಹಬ್ಬದ ಸವಿನೆನಪಿಗಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಹೇಳಿದರು.
ಶೈಖಾ ಮರ್ಕಝ್ ಯೂತ್ ವೆಲ್‌ಫೇರ್ ಅಸೋಸಿಯೇಶನ್ ಬೆಳ್ಳಿಹಬ್ಬದ ಪ್ರಯುಕ್ತ ಗಾಂಧಿ ದಿನಾಚರಣೆ ಅಂಗವಾಗಿ ರವಿವಾರ ಮೀನಾದಿಯಿಂದ ಪಂಚಾಯತ್ ಕಚೇರಿವರೆಗೆ ಆಯೋಜಿಸಲಾದ ಒಂದು ಕಿ.ಮೀ. ವ್ಯಾಪ್ತಿಯ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು. ಯೂತ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಬೂಬಕರ್, ಉಪಾಧ್ಯಕ್ಷ ಮೂಸಾ ಕುಂಞಿ ಮೀನಾದಿ, ಕಾರ್ಯದರ್ಶಿ ಅಬ್ಬಾಸ್, ಕೋಶಾಧಿಕಾರಿ ಅಬ್ದುರ್ರಝಾಕ್ ಪಾರೆ, ಸಂಚಾಲಕ ಹಸೈನಾರ್ ಮೀನಾದಿ, ಪದಾಧಿಕಾರಿಗಳಾದ ಇಸ್ಮಾಯೀಲ್ ಕನಕ ಮುಗೇರ, ಶಾಲಿ, ಅಬ್ಬಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News