ಪ್ರತಿಭೋತ್ಸವ: ಕೆಜಿಎನ್ ಕ್ಯಾಂಪಸ್ ಮಿತ್ತೂರಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Update: 2016-10-02 18:21 GMT

ಪುತ್ತೂರು, ಅ.2: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಕ್ಯಾಂಪಸ್ ವತಿಯಿಂದ ನಡೆದ ದ.ಕ ಜಿಲ್ಲಾ ಮಟ್ಟದ ಪ್ರತಿಭೋತ್ಸವದಲ್ಲಿ ಕೆಜಿಎನ್ ಕ್ಯಾಂಪಸ್‌ಮಿತ್ತೂರಿನ ಪ್ರತಿಭೆಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ದಅವಾ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಶರೀಫ್ ಸಖಾಪಿ ಮಾಣಿ ಶ್ಲಾಘಿಸಿದರು.

ವಿವಿಧ ಸ್ಪರ್ಧೆಗಳಲ್ಲಾಗಿ ಕಾಲೇಜಿನ 23 ವಿದ್ಯಾರ್ಥಿಗಳು ಭಾಗವಹಿಸಿದ್ದು ಸೀನಿಯರ್ ವಿಭಾಗದ ಬುಕ್ ಟೆಸ್ಟ್ ಸ್ಪಧೆಯಲ್ಲಿ ಮುತ್ತಲಿಬ್ ಮುಳ್ಳೇರಿಯಾ, ಕನ್ನಡ ಭಾಷಣದಲ್ಲಿ ಅಮ್ಮಾರ್ ನೀರಕಟ್ಟೆ, ಪೋಸ್ಟರ್ ಡಿಸೈನ್ ಸ್ಪರ್ಧೆಯಲ್ಲಿ ಝಕ್ವಾನ್ ಬಂಟ್ವಾಳ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News