6 ಸರ್ಜಿಕಲ್ ದಾಳಿ ನಡೆಸಿಯೂ ಮನಮೋಹನ್ ಮೌನವಾಗಿದ್ದರು: ಶೌರಿ
Update: 2016-10-05 17:01 GMT
ಹೊಸದಿಲ್ಲಿ, ಅ.5: ಮಾಜಿ ಪ್ರಧಾನಿ ಮನಮೋಹನ್ ಸಿಂಗರ ಸರಕಾರವಿದ್ದಾಗ 6 ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿತ್ತು. ಆದರೆ, ಹಿಂದಿನ ಸರಕಾರ ಈ ದಾಳಿಗಳಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲೇ ಇಲ್ಲವೆಂದು ಬಿಜೆಪಿ ನಾಯಕ ಅರುಣ್ ಶೌರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ರ ನಡುವೆ ಒಳಸಂಚು ನಡೆದಿದೆಯೆಂದು ಅವರು ಆರೋಪಿಸಿದ್ದಾರೆ.
ಪಾಕಿಸ್ತಾನದ ‘ಡಾನ್’ ಪತ್ರಿಕೆಯನ್ನುಲ್ಲೇಖಿಸಿದ ಶೌರಿ, ಸರ್ಜಿಕಲ್ ದಾಳಿಯ ವೇಳೆ 8 ಸೈನಿಕರು ಹತರಾಗಿದ್ದಾರೆ ಹಾಗೂ ಒಬ್ಬ ಸೆರೆಹಿಡಿಯಲ್ಪಟ್ಟಿದ್ದಾನೆಂದು ಪ್ರತಿಪಾದಿಸಿದ್ದಾರೆ.
ಕೇಂದ್ರದ ಅಧಿಕಾರಿ ಬನ್ಸಲ್ರ ಆತ್ಮಹತ್ಯೆ ಪ್ರಕರಣದೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ತಳಕು ಹಾಕಲು ಅವರು ಪ್ರಯತ್ನಿಸಿದ್ದಾರೆ.