ಪಣಂಬೂರು ಬೀಚ್‌ನಲ್ಲಿ ಮಗು ನೀರುಪಾಲು: ರಾತ್ರಿ ಕಾರ್ಯಾಚರಣೆಗೆ ಸಚಿವ ಖಾದರ್ ಸೂಚನೆ

Update: 2016-10-05 17:36 GMT

ಮಂಗಳೂರು, ಅ. 6: ಪಣಂಬೂರು ಬೀಚ್‌ನಲ್ಲಿ ಸ್ಪೀಡ್ ಬೋಟ್‌ನಲ್ಲಿ ತೆರಳಿದ್ದ ಏಳು ಮಂದಿಯಲ್ಲಿ ಮಗುವೊಂದು ನೀರುಪಾಲಾಗಿರುವ ಘಟನೆಗೆ ಸಂಬಂಧಿಸಿ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.

ನಾಟೆಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ ನೀರುಪಾಲಾಗಿದ್ದರು. ಆತನ ಹುಡುಕಾಟವನ್ನು ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಸಚಿವರು ರಾತ್ರಿ ವೇಳೆಯೂ ಹುಟುಕಾಟ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News