ಸಚಿವ ಪ್ರಮೋದ್ ಪ್ರವಾಸ

Update: 2016-10-07 18:23 GMT

ಉಡುಪಿ, ಅ.7:ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅ.9 ಮತ್ತು 10ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅ.9ರಂದು ಬೆಳಗ್ಗೆ 9ಕ್ಕೆ ಅಮ್ಮುಂಜೆ ಸೈಂಟ್ ಅಂತೋನಿ ಚರ್ಚ್‌ಗೆ ಭೇಟಿ, 10ಕ್ಕೆ ಎರ್ಲಪಾಡಿ ಗ್ರಾಪಂ ಸುವರ್ಣ ಗ್ರಾಮ ವಿಕಾಸ ಯೋಜನೆ ಕಾಮಗಾರಿಗಳ ಶಂಕುಸ್ಥಾಪನೆ, ಅಪರಾಹ್ನ 12ಕ್ಕೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರಕ್ಕೆ ಭೇಟಿ, 2:30ಕ್ಕೆ ಅಜ್ಜರಕಾಡು ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದ ಉದ್ಘಾಟನೆ, 3ಕ್ಕೆ ಅಜ್ಜರಕಾಡು ಪುರಭವನದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ, ಸಂಜೆ 5ಕ್ಕೆ ಲಯನ್ಸ್ ಭವನದಲ್ಲಿ ಜಿಲ್ಲಾ ಪ್ರತಿಭೋತ್ಸವ, 6ಕ್ಕೆ ಬೈಲೂರು ಕ್ರಿಸ್ತಜ್ಯೋತಿ ದೇವಾಲಯಕ್ಕೆ ಭೇಟಿ, 6:30ರಿಂದ ವಿವಿಧ ಶಾರದೋತ್ಸವ, ನವರಾತ್ರಿ ಮಹೋತ್ಸವ ಕಾರ್ಯಕ್ರಮಗಳಿಗೆ ಭೇಟಿ. ಅ.10ರಂದು ಬೆಳಗ್ಗೆ 8:30ಕ್ಕೆ ನರ್ನಾಡು ಉಪ್ಪೂರು ಶ್ರೀಬಬ್ಬುಸ್ವಾಮಿ ದೇವಸ್ಥಾನದ ಶಂಕುಸ್ಥಾಪನೆ, 9ಕ್ಕೆ ವಾರಂಬಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, 11ಕ್ಕೆ ಚಾಂತಾರು, ಬ್ರಹ್ಮಾವರ ಗದ್ದಿಗೆ ದೇವಸ್ಥಾನದ ಸಮುದಾಯ ಭವನ ಉದ್ಘಾಟನೆ, 11:30ಕ್ಕೆ ಚೇರ್ಕಾಡಿ ವನದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆಗೆ ಶಿಲಾನ್ಯಾಸ, ನಂತರ ಮಂಗಳೂರು ಮೂಲಕ ಬೆಂಗಳೂರಿಗೆ ತೆರಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News