ನಾಳೆ ಉಪ್ಪಿನಂಗಡಿಗೆ ಸಲೀಮ್ ಮಂಬಾಡ್

Update: 2016-10-07 18:24 GMT

ಉಪ್ಪಿನಂಗಡಿ, ಅ.7: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೇರಳ ರಾಜ್ಯ ಸಮಿತಿ ಸದಸ್ಯ ಹಾಗೂ ತ್ರಿಶ್ಶೂರ್ ಜಿಲ್ಲೆಯ ಕುನ್ನಮ್ಕುಳಂ ಟೌನ್ ಜುಮಾ ಮಸೀದಿಯ ಖತೀಬ್ ವೌಲಾನ ಸಲೀಮ್ ಮಂಬಾಡ್ ಅ.9ರಂದು ಉಪ್ಪಿನಂಗಡಿಗೆ 
ಆಗಮಿಸಲಿದ್ದಾರೆ. ನೆಕ್ಕಿಲಾಡಿಯ ಮಸ್ಜಿದುಲ್ ಹುದಾ ವಠಾರದಲ್ಲಿ ಅಂದು ಸಂಜೆ 7ಕ್ಕೆ ಜಮಾಅತೆ ಇಸ್ಲಾಮೀ ಹಿಂದ್‌ನ ಉಪ್ಪಿನಂಗಡಿ ಶಾಖೆಯು ಆಯೋಜಿಸಿರುವ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ‘ಬಹು ಸಂಸ್ಕೃತಿ ಮತ್ತು ಭಾರತೀಯ ಮುಸ್ಲಿಮರು’ ಎಂಬ ವಿಷಯದ ಕುರಿತು ಅವರು ಮಾತನಾಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News