ಸುಲಿಗೆ ಯತ್ನ: ಆರೋಪಿ ಪರಾರಿ

Update: 2016-10-08 17:55 GMT

ಬೈಂದೂರು, ಅ.8: ಮೊಬೈಲ್ ಅಂಗಡಿಯ ಮಾಲಕರನ್ನು ಚೂರಿ ತೋರಿಸಿ ಸುಲಿಗೆಗೆ ಯತ್ನಿಸಿರುವ ಘಟನೆ ಅ.7ರಂದು ಸಂಜೆ 5:45ರ ಸುಮಾರಿಗೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಎಂಬಲ್ಲಿ ನಡೆದಿದೆ.

ಸುಲಿಗೆ ನಡೆಸಿರುವ ವ್ಯಕ್ತಿಯನ್ನು ಉಪ್ಪುಂದ ಪಿಶರೀಸ್ ಕಾಲೋನಿಯ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಉದಯ ಪೂಜಾರಿ(34) ಎಂಬವರು ನಾಗೂರಿನಲ್ಲಿರುವ ತನ್ನ ಅಂಬಿಕಾ ಮೊಬೈಲ್ ಪಾಯಿಂಟ್ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೊರಡುವಾಗ ಅಲ್ಲಿಗೆ ಬಂದ ಮಹೇಶ್, ಉದಯ ಪೂಜಾರಿಗೆ ಚೂರಿ ತೋರಿಸಿ ಹಣವನ್ನು ಕೊಡುವಂತೆ ಬೆದರಿಸಿ, ಕಿಸೆಯಲ್ಲಿರುವ ಹಣವನ್ನು ಕಿತ್ತುಕೊಳ್ಳಲು ಯತ್ನಿಸಿದನು. ಆಗ ಉದಯ ಪೂಜಾರಿ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ಆತನ್ನು ಹಿಡಿಯಲು ಮುಂದದಾಗ ಆತ ತಪ್ಪಿಸಿಕೊಂಡು ಓಡಿ ಪರಾರಿಯಾದನು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News