ಇಂದಿನ ಕಾರ್ಯಕ್ರಮ

Update: 2016-10-08 18:21 GMT

ಚಲೋ ಉಡುಪಿ: ದಲಿತರ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಸ್ವಾಭಿಮಾನಿ ಸಂಘರ್ಷ ಜಾಥಾ ‘ಚಲೋ ಉಡುಪಿ’. ಉಡುಪಿಯ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಬಳಿಕ ಮಹಾ ಸಮಾವೇಶ, ಬಹಿರಂಗ ಸಭೆ. ಸಮಯ: ಬೆಳಗ್ಗೆ 11ರಿಂದ. ಸ್ಥಳ: ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿಯಿಂದ ಬೀಡಿನಗುಡ್ಡೆಯವರೆಗೆ ಉಡುಪಿ.
ಬ್ಯಾಡ್ಮಿಂಟನ್ ಟೂರ್ನಿ: ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಮಣಿಪಾಲ ಇದರ ವತಿಯಿಂದ 15ನೆ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನೆ. ಸಮಯ: ಅಪರಾಹ್ನ 2:30ಕ್ಕೆ. ಸ್ಥಳ: ಒಳಾಂಗಣ ಕ್ರೀಡಾಂಗಣ, ಅಜ್ಜರಕಾಡು ಉಡುಪಿ.
ಪ್ರಶಸ್ತಿ ಪ್ರದಾನ: ಕೆ.ಕೆ.ಪೈ ಟ್ರಸ್ಟ್ ಮಣಿಪಾಲ ನೀಡುವ ದೇಶದ ಬ್ಯಾಂಕಿಂಗ್ ಕ್ಷೇತ್ರದ ಅತ್ಯುತ್ತಮ ಸಾಧಕನಿಗೆ ನೀಡುವ ಕೆ.ಕೆ.ಪೈ ರಾಷ್ಟ್ರೀಯ ಪ್ರಶಸ್ತಿ ವಿಜಯ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪ್ರಕಾಶ್ ಪಿ.ಮಲ್ಯರಿಗೆ ಪ್ರದಾನ. ಸಮಯ: ಸಂಜೆ 4ಕ್ಕೆ. ಸ್ಥಳ: ಟ್ಯಾಪ್ಮಿ ಸಭಾಂಗಣ, ಬಡಗುಬೆಟ್ಟು ಮಣಿಪಾಲ. ತೀರ್ಪುಗಾರರ ಪರೀಕ್ಷೆ: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯ ಕಬಡ್ಡಿ ತೀರ್ಪುಗಾರರ ಪರೀಕ್ಷಾ ಸಮಾರೋಪ ಸಮಾರಂಭ. ಸಮಯ: ಅಪರಾಹ್ನ 3ಕ್ಕೆ. ಸ್ಥಳ: ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು ಉಡುಪಿ.
ಅಭಿನಂದನೆ: ಉಡುಪಿ ಜಿಲ್ಲಾ ಸಂಪರ್ಣ ಸುವಾರ್ತಾ ಸಭಾಪಾಲಕರ ಒಕ್ಕೂಟದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇವರಿಗೆ ಅಭಿನಂದನಾ ಸಮಾರಂಭ. ಸಮಯ: ಸಂಜೆ 4ಕ್ಕೆ. ಸ್ಥಳ: ಆಶ್ರಯಗಿರಿ, ನ್ಯೂಲೈಫ್ ಫೆಲೋಶಿಪ್ ಚರ್ಚ್, ವಾಸುಕಿ ನಗರ ಬೈಲೂರು ಉಡುಪಿ.
ವಾರ್ಷಿಕ ಅಧಿವೇಶನ: ಬಂಟರ ಸಂಘ, ಯುವ ಬಂಟರ ಸಂಘ ಉಡುಪಿ ಇವರ ವತಿಯಿಂದ ಬಂಟ ಸಮಾಜಬಾಂಧವರ 22ನೆ ವರ್ಷದ ವಾರ್ಷಿಕ ಸಮಾವೇಶ, ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಹಾಯಧನ ವಿತರಣೆ, ಅಂಗವಿಕಲರಿಗೆ ಆರ್ಥಿಕ ಸಹಾಯ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ಸಮಯ: ಬೆಳಗ್ಗೆ 9ರಿಂದ ಹಾಗೂ ಅಪರಾಹ್ನ 1ರಿಂದ. ಸ್ಥಳ: ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ, ಉಡುಪಿ.
ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ: ಪರ್ಯಾಯ ಪೇಜಾವರ ಮಠದ ವತಿಯಿಂದ ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪದಲ್ಲಿ ಇಂದು ‘ನುಡಿ ಮಲ್ಲಿಗೆ-ನಗೆ ಹೋಳಿಗೆ’ ಹಾಸ್ಯ ರಸಾಯನ. ಭಾಗವಹಿಸುವವರು- ಎಚ್.ಡುಂಡಿರಾಜ್, ವೈ.ವಿ.ಗುಂಡೂರಾವ್, ಎಂ. ಎಸ್. ನರಸಿಂಹ ಮೂರ್ತಿ, ಗಂಗಾವತಿ ಪ್ರಾಣೇಶ್. ಸಮಯ: ಸಂಜೆ 5:30ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ.
 ಪೇಜಾವರ ಶ್ರೀಗಳ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 4ಕ್ಕೆ ಮಧ್ವ ಮಂಟಪದಲ್ಲಿ ಸಿರೀಶ ಬೆಂಗಳೂರು ಇವರಿಂದ ಭರತನಾಟ್ಯ, 5ರಿಂದ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯ ಉಡುಪಿ ಇವರಿಂದ ಪ್ರವಚನ, 5ರಿಂದ ರಾಜಾಂಗಣದಲ್ಲಿ ನವರಾತ್ರಿ ವಿಶೇಷ ಸಾಹಿತ್ಯ ಕಾರ್ಯಕ್ರಮದ ಸಮಾರೋಪದಲ್ಲಿ ನುಡಿಮಲ್ಲಿಗೆ- ನಗೆ ಹೋಳಿಗೆ. ಮುಖ್ಯ ಅತಿಥಿ-ಕೆ.ಎಸ್. ಈಶ್ವರಪ್ಪ. ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ, ರಾತ್ರಿ 7ರಿಂದ ರಾಜಾಂಗಣದಲ್ಲಿ ಮೈಸೂರಿನ ವಿದ್ವಾನ್ ಎಚ್.ಸಿ. ಶಿವಶಂಕರ್ ಸ್ವಾಮಿ ಮತ್ತು ಬಳಗದಿಂದ ವಿಶೇಷ ತಾಳ-ವಾದ್ಯ ಸಂಗೀತ. ಕಾರಂತ ಜನ್ಮದಿನಾಚರಣೆ: ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆ ಸಾಲಿಗ್ರಾಮ ಇದರ ವತಿಯಿಂದ ಡಾ.ಕೋಟ ಶಿವರಾಮ ಕಾರಂತರ 114ನೆ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕಾರಂತ ಕಲಾಕುಟೀರ ಉದ್ಘಾಟನೆ, ಡಾ.ಕಾರಂತ ಸಂಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು. ಸಮಯ: ಸಂಜೆ 6ರಿಂದ. ಸ್ಥಳ: ಡಾ.ಕೋಟ ಶಿವರಾಮ ಕಾರಂತ ರಂಗರಥ, ಮಾನಸ, ಸಾಲಿಗ್ರಾಮ. ದಿಬ್ಬಣ-2016: ಕೋಟತಟ್ಟು ಗ್ರಾಪಂ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆಡಾ.ಕಾರಂತ ಜನ್ಮದಿನೋತ್ಸವದ ಅಂಗವಾಗಿ ನಡೆದಿರುವ ‘ದಿಬ್ಬಣ-2016’ರಲ್ಲಿ ಇಂದು ಬೆಳಗ್ಗೆ 10ರಿಂದ ಪುಟಾಣಿ ಮಕ್ಕಳ ಸಮಾವೇಶ ‘ಅಕ್ರೂಟ್’ ಚಿಣ್ಣರ ಜಗಲಿ, ಪ್ರತಿಭಾ ಪ್ರದರ್ಶನ. ಸಂಜೆ 5:30ರಿಂದ ಸಭಾ ಕಾರ್ಯಕ್ರಮ, ನೃತ್ಯ ನಮನ. ಬಳಿಕ ಕುಂದಾಪ್ರ ಭಾಷೆಯ ಚಲನಚಿತ್ರ ಉತ್ಸವದಲ್ಲಿ ರವಿ ಬಸ್ರೂರು ಸಾರಥ್ಯದ ‘ಬಿಲಿಂಡರ್’. ಸ್ಥಳ: ಕಾರಂತ ಥೀಮ್ ಪಾರ್ಕ್ ಕೋಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News