ತಿಂಗಳಾಡಿ ಗಾಂಧಿನಗರ ಕಾಲನಿ ರಸ್ತೆ ನಿರ್ಮಾಣಕ್ಕೆ ಶ್ರಮದಾನ

Update: 2016-10-13 12:12 GMT

ಪುತ್ತೂರು, ಅ.13: ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಂಗಳಾಡಿ ಆದಿದ್ರಾವಿಡ ಜನಾಂಗದ ಗಾಂಧಿನಗರ ಕಾಲನಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯರು ಬುಧವಾರ ಶ್ರಮದಾನ ನಡೆಸಿದರು.

ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು 10 ಲಕ್ಷ ರೂ. ಅನುದಾನವು ಈ ರಸ್ತೆ ನಿರ್ಮಾಣ ಮತ್ತು ರಸ್ತೆ ಕಾಂಕ್ರಿಟೀಕರಣಕ್ಕೆ ಮಂಜೂರಾಗಿದ್ದು, ಈಗಾಗಲೇ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರಿಂದ ಗುದ್ದಲಿಪೂಜೆ ನಡೆದಿದೆ. ಕಾಮಗಾರಿಯ ಪೂರ್ವಭಾವಿಯಾಗಿ ಕಾಲನಿ ಸದಸ್ಯರು ಬುಧವಾರ ಶ್ರಮದಾನದ ಮೂಲಕ ರಸ್ತೆ ಕೆಲಸ ಮಾಡಿದರು. ರಸ್ತೆ ಹಾದುಹೋಗುವ ಜಾಗದಲ್ಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಲಲಿತಾ ರಾಮನಗರ, ಕಾಲನಿ ನಿವಾಸಿಗಳಾದ ಅಣ್ಣು ತಿಂಗಳಾಡಿ, ನಾರಾಯಣ ಎ.ಟಿ., ರವಿ, ಮೋಹನ, ಚಿದಾನಂದ, ಕೃಷ್ಣಪ್ಪ, ರಾಜೇಶ್, ಬಿ.ರಾಜು, ಟಿ.ಸಿ. ನಾರಾಯಣ, ಕುಶಲ, ವರುಣ್, ರಂಜಿತ್, ಹರೀಶ, ಆನಂದ, ರಾಜೇಶ ಕೆ., ರವಿ.ಟಿ.ಎಸ್., ಸುರೇಶ ಜೆ., ಗೀತಾ, ಸುಶೀಲಾ, ಮಿನ್ಕ, ಬೇಬಿ, ನಾಗಮ್ಮ, ಸುಶೀಲ, ಬಾಗಿ, ವಾರಿಜ, ಸುಂದರಿ, ಸುಶೀಲಾ, ಮಮತಾ, ರಾಧಾ, ವಸಂತ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News