ಅ.17ರಂದು ಡಿಕೆಎಂಎ ನೂತನ ಕಚೇರಿ ಉದ್ಘಾಟನೆ

Update: 2016-10-14 13:14 GMT

ಮಂಗಳೂರು, ಅ.14: ನಗರದ ಬಾವುಟ ಗುಡ್ಡೆಯ ಊಟದ ಮನೆ ಹೋಟೆಲ್ ಸಮೀಪದ ಕಾರ್ನಾಡ್ ಸದಾಶಿವ ರಾವ್ ಮೆಮೋರಿಯಲ್ ಟ್ರಸ್ಟ್ ಕಾಂಪ್ಲೆಕ್ಸ್‌ನ ಮೆಝನೈನ್ ಮಹಡಿಯಲ್ಲಿ ಆರಂಭಗೊಂಡ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್(ಡಿಕೆಎಂಎ)ನ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 17 ರಂದು ಸಂಜೆ 4:30 ಕ್ಕೆ ನಡೆಯಲಿದೆ.

ದ.ಕ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ದುಡಿಯುವ ಯಜಮಾನ ಅಥವಾ ದುಡಿಯುವ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಒಂದು ಉತ್ತಮ ಮೊತ್ತದ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಡಿಕೆಎಂಎಯನ್ನು ಸ್ಥಾಪಿಸಲಾಗಿದೆ. ಡಿ.ಕೆ.ಎಂ.ಎ ಯ ಫಲಾನುಭವಿ ಸದಸ್ಯರಾದವರಿಗೆ ಮಾತ್ರ ಈ ಸವಲತ್ತು ಸಿಗಲಿದೆ. ಈ ಸವಲತ್ತನ್ನು ಪಡೆಯಬೇಕಾದರೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜಮಾಅತಿನ ದೃಢೀಕರಣದೊಂದಿಗೆ ಸಲ್ಲಿಸಬೇಕಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳಿಗೆ ಈ ಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದ್ದು, ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಅರ್ಹ ವ್ಯಕ್ತಿಗಳು ಫಲಾನುಭವಿ ಸದಸ್ಯರಾಗುವಲ್ಲಿ ಪ್ರಯತ್ನಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30. ಅರ್ಜಿ ನಮೂನೆ ಪಡೆಯಲು ಮತ್ತು ಸಲ್ಲಿಸಲು ಸಂಸ್ಥೆಯ ಕಚೇರಿಯನ್ನು ಬೆಳಗ್ಗೆ 10 ರಿಂದ ಸಂಜೆ 5:30ರೊಳಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8123099555ನ್ನು ಸಂಪರ್ಕಿಸಬಹುದು ಎಂದು ಡಿಕೆಎಂಎ ಸ್ಥಾಪಕಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News