‘ಕೂಪ ಮಂಡೂಕ’ ಕಿರು ಚಲನಚಿತ್ರ ಚಿತ್ರೀಕರಣಕ್ಕೆ ಚಾಲನೆ
Update: 2016-10-20 13:21 GMT
ಬ್ರಹ್ಮಾವರ, ಅ.20: ಬಾರ್ಕೂರು ಬೆಣ್ಣೆಕುದ್ರು ಶ್ರೀಕುಲಮಾಸ್ತ್ರಿ ಅಮ್ಮನವರ ದೇವಸ್ಥಾನದಲ್ಲಿ ಅಜಯ್ ಸಾಗರ್(ಜೋಷಿ) ನಿಟ್ಟೂರು ನಿರ್ದೇಶನದ ‘ಕೂಪ ಮಂಡೂಕ’ ಕಿರುಚಲನಚಿತ್ರದ ಚಿತ್ರೀಕರಣವನ್ನು ದೇವಸ್ಥಾನದ ಮ್ಯಾನೇಜರ್ ಸೋಮಶೇಖರ್ ಸುವರ್ಣ ಇತ್ತೀಚೆಗೆ ಉದ್ಘಾಟಿಸಿದರು.
ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಕ್ಯಾಮರಾಕ್ಕೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ನಿರ್ದೇಶಕ ಅಜಯ್ ಸಾಗರ್, ಕಲಾವಿದರಾದ ವಾಸು ಅಮೀನ್ ಬಾರ್ಕೂರು, ಜಗದೀಶ್ ಕಾಂಚನ್, ಬಾಬು ಕುಂದಾಪುರ, ವಾಲ್ಟರ್ ಡಿಸೋಜ, ಯೋಗೀಶ್ ಬಂಡಿಮಠ, ಸಹ ಕಲಾವಿದೆ ಮೇಘನಾ ಅಮೀನ್ ಬಾರ್ಕೂರು, ನಿರ್ಮಾಪಕಿ ಮಮತಾ ಅಮೀನ್, ಜ್ಯೋತಿ ಅಮೀನ್, ಶೀನ ಬಂಗೇರ, ಶ್ರೀನಿವಾಸ ಬಂಡಿಮಠ, ಕ್ಯಾಮೆರಾಮೆನ್ ಮನೀಷ್ ಬಂಗೇರ, ಸಹ ನಿರ್ದೇಶಕ ಪ್ರತಾಪ್ ಭಂಡಾರಿ ಸಾಲಿಗ್ರಾಮ, ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.
ನಂತರ ಬಾರಕೂರು, ಬಂಡೀಮಠ ಹಾಗೂ ಒತ್ತಿನೆಣೆಯ ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಯಲಾಯಿತು.