ಸಾಣೂರು: ಸರಕಾರಿ ಜಾಗದಲ್ಲಿದ್ದ ಅಕ್ರಮ ಮನೆಗಳ ತೆರವು
Update: 2016-10-23 10:53 GMT
ಕಾರ್ಕಳ, ಅ.23: ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 11 ಅನಧಿಕೃತ ಶೆಡ್ನಂತಿದ್ದ ಮನೆಗಳನ್ನು ಕಾರ್ಕಳ ತಹಶೀಲ್ದಾರ್ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ.
ವಾಸ್ತವ್ಯವಿಲ್ಲದ ಈ ಮನೆಗಳು ಅಕ್ರಮವಾಗಿ ನಿರ್ಮಾಣಗೊಂಡಿರುವ ಬಂದಿರುವ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್ ಈ ತೆರವು ಕಾರ್ಯಾಚರಣೆ ನಡೆಸಿದರು.
ಕಂದಾಯ ನಿರೀಕ್ಷಕ ಸುರೇಶ್ ರಾವ್, ಗ್ರಾಮ ಕರಣಿಕ ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.