ಮದಕ: "ಬಿ" ಮುನ್ನಾ ಗೆಳೆಯರ ಬಳಗದಿಂದ ಕಬಡ್ಡಿ ಪಂದ್ಯಾಟ
ವಿಟ್ಲ, ಅ.24: ಬಿ ಮುನ್ನಾ ಗೆಳೆಯರ ಬಳಗ ಪಡಾರು, ಮದಕ ಇದರ ವತಿಯಿಂದ 60 ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ರವಿವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತುಳುನಾಡ ವೇದಿಕೆಯ ಅಧ್ಯಕ್ಷ ಕೆ.ಮಹೇಂದ್ರನಾಥ್ ಸಾಲೆತ್ತೂರು ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಸಿ.ಎಚ್.ಅಬೂಬಕರ್, ದುಬೈ ಪವರ್ ಲಿಫ್ಟ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಮದಕ, ನಝೀರ್ ಅಂತರ್ ಮೂಲೆ, ಅದಂ ಕುಂಞ ದುಬೈ ಮಾದಕಟ್ಟೆ, ಅಬ್ಬಾಸ್ ಬಾಳೆಪುಣಿ, ಹನೀಫ್ ತಲಕ್ಕಿ, ಹಮೀದ್ ಮದಕ, ಹೆಲ್ಪಿಂಗ್ ಹ್ಯಾಂಡ್ಸ್(ರಿ) ಕರೈ ಕೊಳ್ನಾಡು ಚೇರ್ ಮ್ಯಾನ್ ಎಚ್.ಎಂ. ಖಾಲಿದ್ ಕರೈ, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಮುಹಮ್ಮದ್ ಗಝ್ಝಾಲಿ, ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟದಲ್ಲಿ ಆಟೊ ಸಲೀಂ ಮಾಲಕತ್ವದ ಗೊಲ್ಡನ್ ಗೈಸ್ ಪಡಾರು ಮದಕ ಪ್ರಥಮ ಬಹುಮಾನ, ಸೆವೆನ್ ಸ್ಟಾರ್ ಕಲ್ಪನೆ ದ್ವಿತೀಯ ಬಹುಮಾನ, ಸೆವೆನ್ ಸ್ಟಾರ್ ಕಲ್ಪನೆ 'ಬಿ' ತೃತೀಯ ಬಹುಮಾನವನ್ನು ಹಾಗೂ ಗ್ರೀನ್ ಸ್ಟಾರ್ ಪರ್ತಿಪ್ಪಾಡಿ ಚತುರ್ಥ ಬಹುಮಾನವನ್ನು ಪಡೆದಿದೆ.
ಕಾರ್ಯಕ್ರಮದಲ್ಲಿ ನೌಫಲ್ ಕೆ.ಬಿ.ಎಸ್. ಸ್ವಾಗತಿಸಿ ವಂದಿಸಿದರು.