ಪ್ರಾಂಶುಪಾಲರ ಮೇಲಿನ ಹಲ್ಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಧರಣಿ
Update: 2016-10-24 12:43 GMT
ಮಂಗಳೂರು, ಅ.24: ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ವಂ.ಮೈಕಲ್ ಸಾಂತುಮಾಯಾರ್ ಅವರ ಮೇಲೆ ವಿದ್ಯಾರ್ಥಿಯಿಂದ ನಡೆದ ಹಲ್ಲೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಯುವ ಕ್ರೈಸ್ತ ಮುಖಂಡ ಜಾಯಲಸ್, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಶೀಘ್ರ ಬಂಧಿಸಬೇಕು. ವಿದ್ಯಾರ್ಥಿಯನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಸುನಿಲ್ ಕುಮಾರ್ ಬಜಾಲ್, ಡೆನಿಸ್ ಡಿಸಿಲ್ವ, ಅಶ್ವಿತ್ ಪಿರೇರ, ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಸಂತೋಷ್ ಬಜಾಲ್, ಫ್ರಾಂಕ್ಲಿನ್ ಮೊಂತೆರೋ, ಜಾಕ್ಸನ್ ಡಿಕೋಸ್ತ, ರಿನಾಲ್ಡ್ ಡಿಸೋಜ, ನಿತೀನ್ ಕುತ್ತಾರ್, ಯಾದವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.