‘ಯಕ್ಷಗಾನ ಕಲಾರಂಗ 2016’ರ ಪ್ರಶಸ್ತಿಗಳು ಪ್ರಕಟ

Update: 2016-10-25 18:51 GMT

ಉಡುಪಿ, ಅ.25: ಯಕ್ಷಗಾನ ಕಲೆ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉಡುಪಿ ಯಕ್ಷಗಾನ ಕಲಾರಂಗವು ಈ ಸಾಲಿನ ಯಕ್ಷ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್, ಸುಳ್ಯ ತಾಲೂಕು ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರತಿಷ್ಠಿತ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಪ್ರಶಸ್ತಿಯ ಮೊತ್ತ 50,000ರೂ. ಆಗಿದೆ. ಉಳಿದಂತೆ ವಿವಿಧ ಕಲಾವಿದರ ನೆನಪಿನಲ್ಲಿ ನೀಡಲಾಗುವ 17 ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ತಲಾ 20,000 ರೂ. ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ನ.6ರ ಸಂಜೆ 5ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದರು.

‘ಯಕ್ಷಚೇತನ’ ಪ್ರಶಸ್ತಿಯನ್ನು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್.ವಿ. ಭಟ್‌ರಿಗೆ ನೀಡಲಾಗುವುದು. ತೀವ್ರ ಅನಾರೋಗ್ಯದಿಂದಿರುವ ಇಬ್ಬರು ಹಿರಿಯ ಕಲಾವಿದರಾದ ನಾಡದ ಮುತ್ತಪ್ಪ ಗೌಡ ಕೋಪುಟ್ ಹಾಗೂ ಹಳ್ಳಿಹೊಳೆಯ ಭಾಸ್ಕರ ಕನ್ನಂತಾಯರಿಗೆ ತಲಾ 2,000 ರೂ.ಗಳ ಮಾಸಾಶನವನ್ನು ಕಲಾರಂಗದ ಯಕ್ಷನಿಧಿಯಿಂದ ನೀಡಲು ನಿರ್ಧರಿಸಲಾಗಿದ್ದು ಇದನ್ನು ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಮುರಲಿ ಕಡೆಕಾರು ತಿಳಿಸಿದರು.

1.ಡಾ.ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿ: ಗೇರುಕಟ್ಟೆ ಗಂಗಯ್ಯ ಶೆಟಿ್ಟ, 2.ಪ್ರೊ.ಬಿ.ವಿ. ಆಚಾರ್ಯ ಸ್ಮಾರಕ ಪ್ರಶಸ್ತಿ: ಬಾಲಕೃಷ್ಣ ನಾಯಕ್ ಬ್ರಹ್ಮಾವರ, 3.ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ.ಶೆಟ್ಟಿ ಸ್ಮಾರಕ ಪ್ರಶಸ್ತಿ: ಲಕ್ಷ್ಮಣ ಕಾಂಚನ್ ಬಾರ್ಕೂರು, 4.ಬಿ.ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮಾರಕ ಪ್ರಶಸ್ತಿ: ಮುಂಡ್ಕೂರು ಜಯರಾಮ ಶೆಟಿ,್ಟ 5.ಕೆ.ವಿಶ್ವಜ್ಞ ಶೆಟ್ಟಿ ಸ್ಮಾರಕ ಪ್ರಶಸ್ತಿ: ಬೊಕ್ಕಸ ಜಗನ್ನಾಥ ರಾವ್, 6.ಕುತ್ಪಾಡಿ ಆನಂದ ಗಾಣಿಗ ಸ್ಮಾರಕ ಪ್ರಶಸ್ತಿ: ಸೀತಾರಾಮ ಕುಮಾರ್ ಕಟೀಲು.

7.ಭಾಗವತ ನಾರ್ಣಪ್ಪಉಪ್ಪೂರ ಸ್ಮಾರಕ ಪ್ರಶಸ್ತಿ:  ವಿಷ್ಣು ಹೆಗಡೆ ಹಿರೇಮಕ್ಕಿ, 8.ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್-ಭಾಗವತ ವಾದಿರಾಜ ಹೆಬ್ಬಾರ್ ಸ್ಮಾರಕ ಪ್ರಶಸ್ತಿ:  ಹಡಿನಬಾಳ ಶ್ರೀಪಾದ ಹೆಗಡೆ, 9.ಶಿರಿಯಾರ ಮಂಜು ನಾಯ್ಕ ಸ್ಮಾರಕ ಪ್ರಶಸ್ತಿ: ಗುಂಡಿಬೈಲು ಸುಬ್ರಾಯ ಭಟ್, 10.ಕೋಟ ವೈಕುಂಠ ಸ್ಮಾರಕ ಪ್ರಶಸ್ತಿ: ಬೆಳ್ಳಾರೆ ವಿಶ್ವನಾಥ ರೈ, 11.ಪಡಾರು ನರಸಿಂಹ ಶಾಸ್ತ್ರಿ ಸ್ಮಾರಕ ಪ್ರಶಸ್ತಿ: ಜಯಕುಮಾರ್ ಜೈನ್.12.ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮಾರಕ ಪ್ರಶಸ್ತಿ: ನಾಗಪ್ಪಹೊಳೆಮೊಗೆ, 13.ಮಲ್ಪೆಶಂಕರನಾರಾಯಣ ಸಾಮಗ ಸ್ಮಾರಕ ಪ್ರಶಸ್ತಿ: ಪದ್ಯಾಣ ಶಂಕರ ನಾರಾಯಣ ಭಟ್, 14.ಐರೋಡಿ ರಾಮ ಗಾಣಿಗ ಸ್ಮಾರಕ ಪ್ರಶಸ್ತಿ: ಜನಾರ್ದನ ಆಚಾರ್ ನೆಲ್ಲೂರು. ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗಳು , 15.ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ: ಕುರ್ನಾಡು ಶಿವಣ್ಣ ಆಚಾರ್ಯ, 16.ಪ್ರಭಾವತಿ ವಿ. ಶೆಣೈ, ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ: ಕೆಂಜಿಮನೆ ನಾಗು ಗೌಡ. 17.ಯಕ್ಷಚೇತನ ಪ್ರಶಸ್ತಿ: ಎಸ್.ವಿ. ಭಟ್ ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News