ಕರುಣಾನಿಧಿಗೆ ಔಷಧ ಅಲರ್ಜಿ: ವಿಶ್ರಾಂತಿಗೆ ವೈದ್ಯರ ಸಲಹೆ

Update: 2016-10-26 09:09 GMT

ಚೆನ್ನೈ, ಅ. 26: ಔಷಧದಿಂದ ಉಂಟಾದ ಅಲರ್ಜಿಯಿಂದಾಗಿ ತಮಿಳ್ನಾಡು ಮಾಜಿ ಮುಖ್ಯಮಂತ್ರಿ ಡಿ.ಎಂ.ಕೆ. ಅಧ್ಯಕ್ಷ ಎಂ.ಕರುಣಾನಿಧಿಗೆ ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆಂದು ವರದಿಯಾಗಿದೆ. ದಿನಾಲೂ ಅವರು ಸೇವಿಸುತ್ತಿದ್ದ ಮದ್ದಿನಿಂದಾಗಿ ಅವರಿಗೆ ಅಲರ್ಜಿ ತಗಲಿಕೊಂಡಿದೆ. ಆದ್ದರಿಂದ ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದು, ಸಂದರ್ಶಕರನ್ನು ಅವರು ಭೇಟಿಯಾಗುವುದಿಲ್ಲ ಎಂದು ಡಿಎಂಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿಲ್ಲ. ಗೋಪಾಲ ಪುರದ ತನ್ನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 93ವರ್ಷ ವಯಸ್ಸಾಗಿರುವ ದ್ರಾವಿಡ ರಾಜಕೀಯದ ತಲೈವರ್ ವ್ಹೀಲ್ ಚೇರ್ ಮೂಲಕ ಸಂಚರಿಸುವುದು. ವರ್ಷಗಳಹಿಂದೆ ಅವರಿಗೆ ನಡೆದಿದ್ದ ಶಸ್ತ್ರ ಚಿಕಿತ್ಸೆ ನಂತರ ಅವರು ದಿನಾಲೂ ಔಷಧ ಸೇವಿಸುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News