ಮನೆಯವರಾಂಡದಲ್ಲಿ ಮಲಗಿದ್ದ 90ವರ್ಷದ ವೃದ್ಧನ ಮೇಲೆ ನಾಯಿಗಳ ದಾಳಿ

Update: 2016-10-26 10:27 GMT

ತಿರುವನಂತಪುರಂ, ಅ. 26: ವರ್ಕಲದಲ್ಲಿ ಮನೆಯ ವರಾಂಡದಲ್ಲಿ ಮಲಗಿ ನಿದ್ರಿಸುತ್ತಿದ್ದ ತೊಂಬತ್ತುವರ್ಷದ ವಯೋವೃದ್ಧನನ್ನು ಬೀದಿನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಗಾಯಾಳು ವರ್ಕಲ ಮುಂಡಯಿಲ್ ಚುರುವಿಳ ಮನೆಯ ರಾಘವ ಎಂಬ ವಯೋವೃದ್ಧರನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆ ಐದು ಗಂಟೆಗೆ ಘಟನೆ ಸಂಭವಿಸಿದ್ದು. ಆರು ಬೀದಿನಾಯಿಗಳು ಒಟ್ಟಿಗೆ ಬಂದು ರಾಘವರನ್ನು ಕಚ್ಚಿ ಗಾಯಗೊಳಿಸಿದೆ.

ರಾಘವರ ಮುಖ, ತಲೆ ಮತ್ತು ಕಾಲುಗಳಿಗೆ ತೀವ್ರಗಾಯಗಳಾಗಿವೆ. ಮೊದಲು ಅವರನ್ನು ವರ್ಕಲ ತಾಲೂಕುಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ತಿರುವನಂತಪುರ ಮಡಿಕಲ್ ಕಾಲೇಜು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News