ಭಾಸ್ಕರ್ ಶೆಟ್ಟಿ ಕೊಲೆ: ಡಿಎನ್ಎ ವರದಿ ಸಿಐಡಿಗೆ ಲಭ್ಯ?
Update: 2016-10-27 15:37 GMT
ಉಡುಪಿ, ಅ.27: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಮಹತ್ವ ಸಾಕ್ಷವಾಗಿರುವ ಮೂಳೆಗಳ ಡಿಎನ್ಎ ಪರೀಕ್ಷೆಯ ವರದಿ ಸಿಐಡಿ ಪೊಲೀಸ ರಿಗೆ ಲಭ್ಯವಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಗೌಪ್ಯತೆ ದೃಷ್ಠಿಯಿಂದ ವರದಿಯ ಮಾಹಿತಿ ಇನ್ನು ಯಾರಿಗೂ ಗೊತ್ತಾಗಿಲ್ಲ. ಈ ವರದಿಯ ವಿಷಯವನ್ನು ಇಟ್ಟುಕೊಂಡು ಸಿಐಡಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಇದೀಗ ಸರಕಾರ ಈ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇವರೇ ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲ್ಲಿದ್ದಾರೆ. ಆದುದರಿಂದ ನಾಳೆ ನಡೆಯುವ ವಿಚಾರಣೆಯಲ್ಲಿ ಮತ್ತೆ ಇನ್ನಷ್ಟು ಸಮಯಾವಕಾಶ ಕೇಳುವ ಸಾಧ್ಯತೆಗಳಿವೆ.