×
Ad

ಕೇಂದ್ರ ಸರಕಾರವನ್ನು ತರಾಟೆಗೆ ತೆಗದುಕೊಂಡ ಸುಪ್ರೀಂ ಕೋರ್ಟ್‌

Update: 2016-10-28 14:26 IST

ಹೊಸದಿಲ್ಲಿ, ಅ.28: ಕೊಲಿಜಿಯಂ ಶಿಫಾರಸ್ಸಿನ ಹೊರತಾಗಿಯೂ ನ್ಯಾಯಾಧೀಶರುಗಳನ್ನು ನೇಮಕ ಮಾಡಲು ಮೀನಾ ಮೇಷ ಎಣಿಸುತ್ತಿರುವ ಕೇಂದ್ರ ಸರಕಾರವನ್ನು ಇಂದು ತೀವ್ರ ತರಾಟೆಗೆ ತೆಗೆದುಕೊಂಡಿರುವ  ಸುಪ್ರೀಂ ಕೋರ್ಟ್‌ ಇದನ್ನೊಂದು ಇಗೋ ವಿಷಯವ್ನಾಗಿ ಮಾಡದಿರುವಂತೆ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿ ಟಿ.ಎಸ್‌ ಠಾಕೂರ‍್ ನ್ಯಾಯಾಧೀಶರುಗಳನ್ನು ನೇಮಕ ಮಾಡದಿದ್ದರೆ ಜನರಿಗೆ ನ್ಯಾಯದ ದಾರಿ ಮುಚ್ಚಿದಂತಾಗುತ್ತದೆ. ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ. ಸರಕಾರ ತನ್ನ ವಿಳಂಬ ನೀತಿಯನ್ನು ಮುಂದುವರಿಸಿದರೆ ಕೋರ್ಟ್ ಹಾಲ್‌ಗಳಿಗೆ ಬೀಗ ಹಾಕಬೇಕಾಗುತ್ತದೆ ಎಂದರು.
ನ್ಯಾಯಾಧೀಶರ ನೇಮಕದಲ್ಲಿ ವಿಳಂಬವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿರುವ ಸುಪ್ರೀಂ ಕೋರ್ಟ್,  ಮೆಮರಾಂಡಮ್‌  ಆಫ್ ಪ್ರೊಸೀಜರ್' (ಎಂಒಪಿ) ಇಲ್ಲದೆಯೂ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ನೀವು ಬದ್ಧರಾಗಿರುವಿರಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News