30ರಂದು ಮುಹಿಮ್ಮಾತ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರದ ಉದ್ಘಾಟನಾ ಸಮಾರಂಭ
Update: 2016-10-29 20:58 IST
ಮಂಗಳೂರು,ಅ.29:2017 ಎಪ್ರಿಲ್ 27ರಿಂದ 30ರ ತನಕ ನಡೆಯಲಿರುವ ಕುಂಬಳೆಯ ಮುಹಿಮ್ಮಾತ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರದ ಉದ್ಘಾಟನಾ ಸಮಾರಂಭ ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 30ರಂದು ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಡಾ. ಫಾರೂಕ್ ನಯೀಮಿ ಕೊಲ್ಲಂ ತ್ರಿವಳಿ ತಲಾಕ್ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಸಚಿವ ಯುಟಿ ಕಾದರ್, ವೈ ಅಬ್ದುಲ್ಲ ಕುಞಿ, ಕನಚೂರು ಮೋನು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ