ಮಂಜೇಶ್ವರ : ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ನಿಂದ ಏಕದಿನ ತರಬೇತಿ ಶಿಬಿರ

Update: 2016-10-30 05:11 GMT

ಮಂಜೇಶ್ವರ, ಅ.30: ಸಮಸ್ತ ಕೇರಳ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್  ವತಿಯಿಂದ ಮಹಲ್‌ ಸಬಲೀಕರಣದಲ್ಲಿ ಉಲಮಾ ಉಮರಾಗಳ ಕರ್ತವ್ಯ ಎಂಬ ವಿಷಯದಲ್ಲಿ ಏಕ ದಿನ ಶಿಬಿರ ಮಂಜೇಶ್ವರ ಕುನ್ನಿಲ್ ಮದ್ರಸಾ ಸಭಾಂಗಣದಲ್ಲಿ ನಡೆಯಿತು.

 ಮುಫತ್ತಿಸ್ ಹಂಝ ಫೈಝಿ ಉದ್ಗಾಟಿಸಿದರು. ಅಧ್ಯಕ್ಷ ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದರು. ಅಂತಾರಾಷ್ಟ್ರೀಯ ತರಬೇತುದಾರ ಎಂ.ವಿ. ಮುಹಮ್ಮದಲಿ ಮಾಸ್ಟರ್ ತರಗತಿ ನಡೆಸಿದರು.

ಯು.ಎಂ ಮುಹಮ್ಮದ್ ಮದನಿ, ಉಮ್ಮರ್ ಹಾಜಿ, ಹನೀಫ್ ಎಂ.ಎಚ್., ಮಚ್ಚಂಪಾಡಿ ಮುದರ್ರಿಸ್ ಬಶೀರ್ ಬಾಖವಿ, ಮುಹಮ್ಮದ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ಲ ಮುಸ್ಲಿಯಾರ್ ಸ್ವಾಗತಿಸಿದರು. ಮೂರು ಸೆಶನ್ ಗಳಲ್ಲಾಗಿ ನಡೆದ ತರಬೇತಿ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News